‘ಜೆಡಿಎಸ್ ‘ನಿಂದ ಸ್ಪರ್ಧಿಸಲು ಮಂಡ್ಯದಲ್ಲಿ ‘ಗಂಡಸರು’ ಇಲ್ವ? – ‘ಶಾಸಕ ಕದಲೂರು ಉದಯ್’ ಪ್ರಶ್ನೆ

Team Newsnap
1 Min Read

ಮಂಡ್ಯ: ಚುನಾವಣೆಗೆ ಹೊರಗಿನವರು ಬಂದು ಯಾಕೆ ಸ್ಪರ್ಧಿಸಬೇಕು.? ಜಿಲ್ಲೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸುವ ಗಂಡಸರು ಇಲ್ವ ಎಂದು ಶಾಸಕ ಕದಲೂರು ಉದಯ್ ವಾಗ್ಧಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮದ್ದೂರಿನಲ್ಲಿ ಮಾತನಾಡಿದಂತ ಅವರು ಜೆಡಿಎಸ್ ನಿಂದ ಮಂಡ್ಯದಲ್ಲಿ ಸ್ಪರ್ಧಿಸುವ ಗಂಡಸರು ಇಲ್ವ? . ಯಾಕೆ ಬೇರೆ ಜಿಲ್ಲೆಯವರು ಬರಬೇಕು.? ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ –ಅಕ್ರಮವಾಗಿ ಸಾಗಿಸುತ್ತಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ತಂಬಾಕು ಜಪ್ತಿ

ಜೆಡಿಎಸ್ ಪಕ್ಷದಲ್ಲಿ ಸಮರ್ಥ ಕಾರ್ಯಕರ್ತರಿಲ್ವ? ನಾಯಕರ ಮಕ್ಕಳು, ಕುಟುಂಬಸ್ಥರೇ ಸ್ಪರ್ಧಿಸಬೇಕಾ? ಐದು ವರ್ಷದಿಂದ ನಿಖಿಲ್ ಎಲ್ಲಿ ಹೋಗಿದ್ದರು.? ಜನ ಸೇವೆ ಮಾಡೋರು ನಿರಂತವಾಗಿ ಇರಬೇಕು. ಚುನಾವಣೆ ಬಂದಾಗ ಬರೋಕೆ ಜನ ದಡ್ಡರು ಅಲ್ಲ ಎಂದು ವಾಗ್ಧಾಳಿ ನಡೆಸಿದ್ದಾರೆ.

Share This Article
Leave a comment