ಅತ್ಯಾಚಾರ ಆರೋಪಿ ಬಂಧಿಸಿಲ್ಲ: ಜಾರಕಿಹೊಳಿ ಸಹೋದರರಿಂದ ಬಿಜೆಪಿ ಸರ್ಕಾರಕ್ಕೆ ಥ್ರೆಟ್ – ಎಲ್ ಆರ್ ಎಸ್

Team Newsnap
1 Min Read

ರಾಜ್ಯದ ಬಿಜೆಪಿ ನೇತೃತ್ವದ
ಸರ್ಕಾರಕ್ಕೆ ಜಾರಕಿಗೊಳಿ ಸಹೋದರರಿಂದ ಬೆದರಿಕೆ ಇದೆ‌ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಹೇಳಿದರು.

ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಿವರಾಮೇಗೌಡರು
ಎಸ್‌ಐಟಿ ತನಿಖೆಯಿಂದ‌ ಜಾರಕಿಹೊಳಿಗೆ ಕ್ಲೀನ್‌ಚಿಟ್ ಸಿಗುವುದರಲ್ಲಿ ಅನುಮಾನವಿಲ್ಲ ಎಂದರು.

ಒಬ್ಬ ಅತ್ಯಾಚಾರಿ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ಯನ್ನು ಖುದ್ದು ಮುಖ್ಯಮಂತ್ರಿಗಳೆ ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ.
ಹೀಗಿರುವಾಗ ಎಸ್ ಐಟಿ ತನಿಖೆ ಹಳ್ಳ ಹಿಡಿಯುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಆರೋಪಿಯನ್ನು ಬಂಧಿಸದಿದ್ರೆ ಸಿಬಿಐ ತನಿಖೆಗೆ ಒತ್ತಾಯಿಸಿ ನಾವೇ ಖಾಸಗಿ ಪಿಐಎಲ್ ಹಾಕ್ತಿವಿ‌. ಮುಂದೆ ನಮ್ಮ ಸರ್ಕಾರ ಬಂದ್ರೆ ಸಿಬಿಐ ತನಿಖೆಗೆ ಪ್ರಕರಣವನ್ನ ವಹಿಸುತ್ತೇವೆ. ಎಂದು ತಿಳಿಸಿದರು.

ಡ್ರಗ್ ಕೇಸ್ ರೀತಿ ಸಿಡಿ ಕೇಸ್ ಕೂಡ ಹಳ್ಳ ಹಿಡಿಯುತ್ತದೆ. ಡ್ರಗ್ ಕೇಸ್‌ನಲ್ಲಿ ಬಿಲ ಅಗೆದು ಇಲಿ ಹಿಡಿಯುವ ಹಾಗೆ
ಬೇಕಾದವರನ್ನು ಬಿಟ್ಟು, ಬೇಡದವರನ್ನು ಹಿಡಿದರು. ಅದೇ ರೀತಿ ಈ ಕೇಸ್‌ ಸಹ ಹಳ್ಳ ಹಿಡಿಯುತ್ತದೆ. ಪೊಲೀಸರು ಸರ್ಕಾರ ಅನ್ನ ತಿನ್ನುತ್ತಿದ್ದೇವೆ ಎಂದರೆ ಜಾರಕಿಹೊಳಿಯನ್ನು ಬಂಧಿಸಬೇಕಿತ್ತು.
ಆದ್ರೆ ಇಲ್ಲಿವರೆಗೆ ಬಂಧಿಸುವ ಕೆಲಸ ಆಗಿಲ್ಲ ಎಂದರು.

ಈ ನಾವು ಕೋರ್ಟ್‌ನಲ್ಲಿ ಈ ಬಗ್ಗೆ ಖಾಸಗಿ ಕೇಸ್‌ ಹಾಕಿ, ಸಿಬಿಐಗೆ ವಹಿಸಲು ಹೋರಾಟ ಮಾಡುತ್ತೇವೆ. ಕುಮಾರಸ್ವಾಮಿ ಸರ್ಕಾರ ಬಂದಾಗ ಈ ಕೇಸ್‌ ಬಗ್ಗೆ ಸಿಬಿಐ ತನಿಖೆ ಮಾಡಿಸುತ್ತೇವೆ. ಸಂತ್ರಸ್ತೆಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ.
ಎಸ್‌ಐಟಿ ಅವರು ಸರಿಯಾಗಿ ಕೆಲಸ ಮಾಡುತ್ತಾರೆ ಎಂದು ಗ್ಯಾರಂಟಿ ಇಲ್ಲ ಎಂದರು.

Share This Article
Leave a comment