January 28, 2026

Newsnap Kannada

The World at your finger tips!

download 4 1

ಇಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ

Spread the love

ನವದೆಹಲಿ
ಅರಣ್ಯ ವನ್ಯಜೀವಿಗಳ ರಕ್ಷಣೆಗಾಗಿ ತ್ಯಾಗ, ಬಲಿದಾನ ಮಾಡಿದ ಅರಣ್ಯ ಸಿಬ್ಬಂದಿಗಳ ಸ್ಮರಿಸುವ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಎಂದು ಕರೆಯಲಾಗುತ್ತದೆ.

 1730ರ ಸೆಪ್ಟೆಂಬರ್ 11 ರಂದು ರಾಜಸ್ಥಾನದ ಜೋಧಪುರದ ಮಹಾರಾಜ ಅಭಯಸಿಂಗ್ ನ ಸೈನಿಕರು ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಕೇಜರ್ಲಿ ಮರಗಳನ್ನು ಕಡಿಯಲು ಮುಂದಾಗುತ್ತಾರೆ.
ಆಗ ಕೇಜರ್ಲಿ ಮರಗಳನ್ನು ಕಡಿಯಲು ವಿರೋಧಿಸಿದ ಅಲ್ಲಿನ ಬಿಷ್ಣೋಯಿ ಸಮುದಾಯ ದ ಮಹಿಳೆಯರು, ಮಕ್ಕಳೂ ಸೇರಿ ಒಟ್ಟು 363 ಜನರನ್ನು ಸಾಮೂಹಿಕವಾಗಿ ಆ ದಿನ ರಾಜನ ಸೈನಿಕರು ನಿರ್ದಯವಾಗಿ ಕೊಲ್ಲುತ್ತಾರೆ.

ಅರಣ್ಯ, ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಈ ದಿನವನ್ನು*ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ವೆಂದು ಘೋಷಿಸಿರುತ್ತದೆ.

ಈ ಹಿನ್ನೆಲೆಯಲ್ಲಿ ಇಂದು ಬಿಷ್ಣೋಹಿ ಜನರ ತ್ಯಾಗದ ಜೊತೆಜೊತೆಗೆ ದೇಶದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತ್ಯಾಗ ಮತ್ತು ಬಲಿದಾನ ಮಾಡಿ, ಹುತಾತ್ಮರಾಗಿರುವ ಅರಣ್ಯ ಸಿಬ್ಬಂದಿಗಳ ಸ್ಮರಣೆಗಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ.

error: Content is protected !!