ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಕೆ ಮರೀಗೌಡ, ಮೈಷುಗರ್ ಗೆ ಗಂಗಾಧರ್ , ಅಹಾರ ನಿಗಮಕ್ಕೆ ಡಾ ಕೃಷ್ಣಗೆ ಅಧ್ಯಕ್ಷ ಸ್ಥಾನ

Team Newsnap
1 Min Read
  • 44 ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ
  • ⁠ಲೋಕಸಭೆ ಚುನಾವಣೆ ಹತ್ತಿರದಲ್ಲಿರುವಾಗ ಮಹತ್ವದ ನಿರ್ಧಾರ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಸರ್ಕಾರ 44 ನಿಗಮ ಮಂಡಳಿ ಪ್ರಾಧಿಕಾರದ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಕ ಮಾಡಿದೆ.

ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸವಂತೆ ತಿಳಿಸಿದೆ. ಅದರಂತೆಯೇ ಕನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರನ್ನಾಗಿ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರನ್ನು ನೇಮಿಸಿದೆ.



ಮಂಡ್ಯ ಮೈಷುಗರ್ ಅಧ್ಯಕ್ಷರಾಗಿ ಸಿ ಡಿ ಗಂಗಾಧರ್ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕೆ ಮರೀಗೌಡರನ್ನು ಅಧ್ಯಕ್ಷರಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.ಬೆದರಿಸಿ ಯುವತಿಯಿಂದ ಹಣ ಪಡೆದ ಆರೋಪ : ನಾಲ್ವರು ಪೊಲೀಸ್‌ ಅಮಾನತು

ಯಾರು ಯಾವ ನಿಗಮಕ್ಕೆ ಅಧ್ಯಕ್ಷರು ? ಪಟ್ಟಿ ಹೀಗಿದೆ

  • ನಾಗಲಕ್ಷ್ಮಿ ಚೌಧರಿ – ಅಧ್ಯಕ್ಷರು, ಮಹಿಳಾ ಆಯೋಗ
  • ಮರಿಗೌಡ – ಅಧ್ಯಕ್ಷ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
  • ವಿನೋದ್ ಅಸೂಟಿ – ಉಪಾಧ್ಯಕ್ಷ, ಕ್ರೀಡಾ ಪ್ರಾಧಿಕಾರ
  • ಸರೋವರ ಶ್ರೀನಿವಾಸ್ – ಅಧ್ಯಕ್ಷ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
  • ಅಲ್ತಾಫ್ – ಅಧ್ಯಕ್ಷ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ
  • ಕಾಂತಾ ನಾಯಕ್ – ಅಧ್ಯಕ್ಷೆ, ಕೌಶಲ್ಯ ಅಭಿವೃದ್ಧಿ ನಿಗಮ
  • ಎಚ್.ಎಂ. ರೇವಣ್ಣ – ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ
  • ಆಂಜನೇಯಲು – ಅಧ್ಯಕ್ಷ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ
  • ಮಂಜುನಾಥ್ ಗೌಡ – ಮಲೆನಾಡು ಪ್ರಾಧಿಕಾರ
  • ಸುಂದರೇಶ್ – ಶಿವಮೊಗ್ಗ ಅಭಿವೃದ್ಧಿ ಪ್ರಾಧಿಕಾರ
  • ಮಂಡ್ಯ ಡಾ.ಹೆಚ್ ಕೃಷ್ಣ – ಆಹಾರ ನಿಗಮ
  • ಪಲ್ಲವಿ – ಸಾಂಬಾರು ಮಂಡಳಿ
  • ಜಯಸಿಂಹ- ಬ್ರಾಹ್ಮಣ ಅಭಿವೃದ್ಧಿ ಮಂಡಳಿ
  • ವಿಜಯ್​ ಕೆ ಮುಳುಗುಂದ್​- ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ
  • ಮರಿಸ್ವಾಮಿ ಚಾಮರಾಜನಗರ- ಅಧ್ಯಕ್ಷರು ಕಾಡಾ, ಮೈಸೂರು
  • ಸದಾಶಿವ್​ ಉಲ್ಲಾಳ್​- ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ
  • ರಘನಂದನ್​ ರಾಮಣ್ಣ- ಬೆಂಗಳೂರು ಮೈಸೂರು ಇನ್ಫಾಸ್ಟ್ರಕ್ಚರ್​ ಕಾರಿಡಾರ್​ ಪ್ರದೇಶ ಯೋಜನೆ ಪ್ರಾಧಿಕಾರ
  • ಬಸವರಾಜ್​ ಜಾಬಶೆಟ್ಟಿ- ಬೀದರ್​ ನಗರಾಭಿವೃದ್ಧಿ ಪ್ರಾಧಿಕಾರ
  • ಸಾಧು ಕೋಕಿಲ- ಕರ್ನಾಟಕ ಚಲನಚಿತ್ರ ಅಕಾಡೆಮಿ

Share This Article
Leave a comment