ಮಾಜಿ ಸಿಎಂ ಸಿದ್ದರಾಮಯ್ಯಗೆ ನನ್ನ ಕ್ಷೇತ್ರ ಬಿಟ್ಟು ಕೊಡೋಕೆ ಈಗಲೂ ಸಿದ್ಧ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದರು.
ಸುದ್ದಿಗಾರರಜೊತೆ ಮಾತಾಡಿದ ಜಮೀರ್, ಸಿದ್ದರಾಮಯ್ಯಗಾಗಿ ಕ್ಷೇತ್ರ ಬಿಟ್ಟು ಕೊಡ್ತಿಲ್ಲ, ರಾಜ್ಯದ ಜನತೆಗಾಗಿ ತ್ಯಾಗ ಮಾಡುವೆ ಎಂದರು.
ನಾನು ಎಲ್ಲೇ ಹೋದರೂ 2013-18 ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಮಾಡಿರುವ ಕೆಲಸಗಳ ಬಗ್ಗೆ ಈಗಲೂ ರಾಜ್ಯದ ಜನ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯಕ್ಕಾಗಿ ನಾನು ನನ್ನ ಕ್ಷೇತ್ರ ಸಿದ್ದರಾಮಯ್ಯ ಸಾಹೇಬರಿಗೆ ಬಿಟ್ಟು ಕೊಟ್ಟುಹೈಎಸ್ಟ್ ಲೀಡ್ನಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿಕೊಂಡು ಬರ್ತೀನಿ. ಯಾರು ಊಹಿಸಲಾಗದಷ್ಟು ಭಾರೀ ಅಂತರದಿಂದ ಗೆಲ್ಲಿಸುತ್ತೇನೆ ಎಂದು ಜಮೀರ್ ಸವಾಲು ಹಾಕಿದರು.