ಮುರುಗೇಶ್ ನಿರಾಣಿ ಭೇಟಿಯಾದ ಸಂಸದೆ ಸುಮಲತಾ: ಅಕ್ರಮದ ಗಣಿ ಉದ್ಯಮದ ಬಗ್ಗೆ ದೂರು

Team Newsnap
1 Min Read

ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಸೋಮವಾರ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರನ್ನು ಸಚಿವರ ಅಧಿಕೃತ ನಿವಾಸದಲ್ಲಿ ಭೇಟಿ ಮಂಡ್ಯ ಜಿಲ್ಲೆಯಲ್ಲಿನ‌ ಅಕ್ರಮ ಗಣಿಗಾರಿಕೆ ವಿರುದ್ದ ‌ದೂರು‌ ಸಲ್ಲಿಸಿದರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಲವು ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಗೆ ಮಾಡಲಾಗುತ್ತಿದೆ. ಇದರಿಂದ ರೈತರಿಗೆ, ಪರಿಸರಕ್ಕೆ ಹಾಗೂ ಕೆಆರ್ ಎಸ್ ಅಣೆಕಟ್ಟೆಗೆ ದೊಡ್ಡ ಮಟ್ಟದಲ್ಲಿ ಹಾನಿಯಾಗುತ್ತಿದೆ. ಈ ಗಣಿಗಾರಿಗೆಯನ್ನು ಕೂಡಲೇ ನಿಷೇಧಿಸುವಂತೆ ಸಚಿವರಿಗೆ ಸುಮಲತಾ ಪತ್ರ ಬರೆದಿದ್ದಾರೆ.

ಗಣಿಗಾರಿಗೆ ಕುರಿತಂತೆ ಈ ಹಿಂದೆ ಹಲವು ಬಾರಿ ನೋಟಿಸ್ ನೀಡಲಾಗಿದೆ. ಅಲ್ಲದೆ ರಾಜಧನ 1200 ಕೋಟಿ ಮತ್ತು ದಂಡವನ್ನು ವಸೂಲಾತಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಒಪ್ಪಿಸಬೇಕೆಂದು ಸುಮಲತಾ ಪತ್ರದಲ್ಲಿ ಹೇಳಿದ್ದಾರೆ.

Share This Article
Leave a comment