ಕೆರೆಗೆ ಕಾರು ಮೊಗುಚಿ ಬಿದ್ದು ತಾಯಿ, ಮಗಳು ಜಲ ಸಮಾಧಿಯಾದ ಘಟನೆ ಸುಂಟಿಕೊಪ್ಪದಲ್ಲಿ ಕಳೆದ ರಾತ್ರಿ ಜರುಗಿದೆ.
ಸುಂಟಿಕೊಪ್ಪದ ಬಾಳೆಕಾಡು ಕೆರೆಯಲ್ಲಿ ಕಾರು ಪಲ್ಟಿಯಾಗಿದ್ದರಿಂದ ತಾಯಿ ಬಬಿತಾ, ಮಗಳು ಪಲ್ಲವಿ ದುರಂತ ಸಾವು ಕಂಡರು.
ಮಡಿಕೇರಿ ಅರಣ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ವೆಂಕಟೇಶ್ ತಮ್ಮ ಪತ್ನಿ ಬಬಿತಾ ಮತ್ತು ಮಗಳು ಪಲ್ಲವಿಯೊಂದಿಗೆ ಮಡಿಕೇರಿಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕಾರು ಹತೋಟಿ ತಪ್ಪಿ ಬಾಳೆಕಾಡು ಕೆರೆಯಲ್ಲಿ ಪಲ್ಟಿಯಾಗಿದೆ.
ವೆಂಕಟೇಶ ಈಜಿ ದಡ ಸೇರಿದ್ದಾರೆ. ಕೆರೆ ಒಳಗೆ ಕಾರಿನಲ್ಲಿ ಸಿಲುಕಿದ್ದ ಪತ್ನಿ ಬಬಿತ ಮತ್ತು ಮಗಳು ಪಲ್ಲವಿ ಜಲ ಸಮಾಧಿಯಾದರು. ಕ್ರೇನ್ ಬಳಸಿ ಕೆರೆಯಿಂದ ಕಾರನ್ನು ಮೇಲಕ್ಕೆ ಎತ್ತಿ ಮೃತ ದೇಹ ಹೊರ ತೆಗೆಯಲಾಗಿದೆ.
- ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ