February 22, 2026

Newsnap Kannada

The World at your finger tips!

lake

ಕೆರೆಗೆ ಕಾರು ಪಲ್ಟಿ : ಅಮ್ಮ, ಮಗಳು ಜಲ ಸಮಾಧಿ – ಈಜಿ ದಡ ಸೇರಿದ ಅಪ್ಪ!

Spread the love

ಕೆರೆಗೆ ಕಾರು ಮೊಗುಚಿ ಬಿದ್ದು ತಾಯಿ, ಮಗಳು ಜಲ ಸಮಾಧಿಯಾದ ಘಟನೆ ಸುಂಟಿಕೊಪ್ಪದಲ್ಲಿ ಕಳೆದ ರಾತ್ರಿ ಜರುಗಿದೆ.

ಸುಂಟಿಕೊಪ್ಪದ ಬಾಳೆಕಾಡು ಕೆರೆಯಲ್ಲಿ ಕಾರು ಪಲ್ಟಿಯಾಗಿದ್ದರಿಂದ ತಾಯಿ ಬಬಿತಾ, ಮಗಳು ಪಲ್ಲವಿ ದುರಂತ ಸಾವು ಕಂಡರು.

ಮಡಿಕೇರಿ ಅರಣ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ವೆಂಕಟೇಶ್ ತಮ್ಮ ಪತ್ನಿ ಬಬಿತಾ ಮತ್ತು ಮಗಳು ಪಲ್ಲವಿಯೊಂದಿಗೆ ಮಡಿಕೇರಿಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕಾರು ಹತೋಟಿ ತಪ್ಪಿ ಬಾಳೆಕಾಡು ಕೆರೆಯಲ್ಲಿ ಪಲ್ಟಿಯಾಗಿದೆ.

ವೆಂಕಟೇಶ ಈಜಿ‌ ದಡ ಸೇರಿದ್ದಾರೆ. ಕೆರೆ ಒಳಗೆ ಕಾರಿನಲ್ಲಿ ಸಿಲುಕಿದ್ದ ಪತ್ನಿ ಬಬಿತ ಮತ್ತು ಮಗಳು ಪಲ್ಲವಿ ಜಲ ಸಮಾಧಿಯಾದರು. ಕ್ರೇನ್ ಬಳಸಿ ಕೆರೆಯಿಂದ ಕಾರನ್ನು ಮೇಲಕ್ಕೆ ಎತ್ತಿ ಮೃತ ದೇಹ ಹೊರ ತೆಗೆಯಲಾಗಿದೆ.

error: Content is protected !!