ಮೈಸೂರಿನ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭಾರಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಕೆ ಆರ್ ನಗರ ಶಾಸಕ ಸಾ.ರಾ.ಮಹೇಶ್ ರೋಹಿಣಿ ವಿರುದ್ದ 1,200 ಪುಟಗಳ ದಾಖಲೆ ಸಲ್ಲಿಸಿ ಯುದ್ದ ಸಾರಿದ್ದಾರೆ.
ಆರೋಪಗಳು ಏನು ? :
1) 13 ರು ಬಟ್ಟೆ ಬ್ಯಾಗ್ 52 ರೂ.ಗಳಿಗೆ ಖರೀದಿ.
2) ಡಿಸಿ ನಿವಾಸದಲ್ಲಿ 5೦ ಲಕ್ಷ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣ.
3) ಪಾರಂಪರಿಕ ಮಾರ್ಗಸೂಚಿ ಉಲ್ಲಂಘಿಸಿ ವೆಟ್ರಿಫೈಡ್ ಟೈಲ್ಸ್ ಅಳವಡಿಕೆ
4) ಕೋವಿಡ್ನಿಂದ 969 ಮಂದಿ ಮೃತಪಟ್ಟರೂ 238 ಎಂದು ತಪ್ಪು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವುದು
5) ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಕಾರಣ ರೋಹಿಣಿ ಕಾರಣ ಎಂಬ ಆರೋಪ
ಈ ಎಲ್ಲಾ ಆರೋಪಗಳಿಗೆ ಇಂದು ತನಿಖಾಧಿಕಾರಿ ಮುಂದೆ 1,200 ಪುಟಗಳ ದಾಖಲಾತಿಗಳನ್ನು ಸಲ್ಲಿಸಿದ್ದಾರೆ.
ರೋಹಿಣಿ ಸಿಂಧೂರಿ ಅವರನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ಸಾ.ರಾ.ಮಹೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ.