ರಾಮನಗರದಲ್ಲಿ ಮಿಸ್ ಫೈರ್ : 7 ವರ್ಷದ ಬಾಲಕ ಸ್ಥಳದಲ್ಲೇ ಸಾವು

Team Newsnap
1 Min Read

ನಾಡಬಂದೂಕು ಮಿಸ್ ಫೈರ್ ಆಗಿ 7 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಕಾಡಶಿವನಹಳ್ಳಿಯಲ್ಲಿ ಜರುಗಿದೆ.

ತೋಟದ ಮನೆಯಲ್ಲಿ ನಾಡಬಂದೂಕು ಹಿಡಿದುಕೊಂಡು ಕಾಡಶಿವನಹಳ್ಳಿ ಗ್ರಾಮದ ಮಲ್ಲೇಶ ಎಂಬುವರು ಜಮೀನಿನಲ್ಲಿ ಕೆಲಸಕ್ಕೆ ಬಂದಿದ್ದ ಅಮಿನುಲ್ಲಾ. ಸಮ್ ಸೂನ್ ದಂಪತಿಯ ಪುತ್ರರಾದ 16 ವರ್ಷದ ಸಾಜಿದ್ ತನ್ನ ಸಹೋದರ 7 ವರ್ಷದ ಶಮಾ ಮೇಲೆ ಮಿಸ್ ಫೈರಿಂಗ್ ಮಾಡಿದ ಪರಿಣಾಮ ಶಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸುರಕ್ಷತಾ ನಿಯಮ ಪಾಲಿಸಿದ ಮಾಲೀಕ ಹಾಗೂ ಸಾಜೀದ್ ನನ್ನು ಪೊಲೀಸರು ಬಂಧಿಸಿದ್ದಾರೆ, ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಾಳೆಯಿಂದ ಬೆಳಗಾವಿ ಚಳಿಗಾಲ ಅಧಿವೇಶನ ಆರಂಭ : ನಾಲ್ಕು ಹೊಸ ಮಸೂದೆಗಳ ಮಂಡನೆ ಸಾಧ್ಯತೆ

Share This Article
Leave a comment