February 23, 2026

Newsnap Kannada

The World at your finger tips!

yogesh

ಸಚಿವ ಯೋಗೇಶ್ವರ್‌, ಸಿ.ಟಿ. ರವಿ ದಿಢೀರ್ ದೆಹಲಿಗೆ ಪ್ರಯಾಣ

Spread the love

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್​​ ದಿಢೀರ್​​ ದೆಹಲಿಗೆ ತೆರಳಿದ್ದಾರೆ. ಕಳೆದ ರಾತ್ರಿ 8.30ಕ್ಕೆ ವಿಮಾನ ಮೂಲಕ ಯೋಗೇಶ್ವರ್ ದೆಹಲಿಗೆ ಪ್ರಯಾಣ ಮಾಡಿದ್ದಾರೆ.

ಇಂದು ಕೇಂದ್ರ ನಾಯಕರ ಭೇಟಿಗೆ ಯೋಗೇಶ್ವರ್‌ ಕಾಲಾವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ. ಇನ್ನು ನಿನ್ನೆ ರಾತ್ರಿಯೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೂಡಾ ದೆಹಲಿಯನ್ನು ತಲುಪಿದ್ದಾರೆ.

ಇತ್ತೀಚೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಬೆಂಗಳೂರಿಗೆ ಆಗಮಿಸಿ, ಸಚಿವರು ಶಾಸಕರ ಜೊತೆ ಮಾತುಕತೆ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಯೋಗೇಶ್ವರ್, ಪರೀಕ್ಷೆ ಬರೆದಿದ್ದೇವೆ ರಿಸಲ್ಟ್​​ಗೋಸ್ಕರ ಕಾಯುತ್ತಿದ್ದೇವೆ ಅಂತ ಹೇಳಿಕೆ ನೀಡಿದರು.

ಈ ಬೆನ್ನಲ್ಲೆ ಬಿಜೆಪಿಯ ಇಬ್ಬರೂ ನಾಯಕರ ದೆಹಲಿ ಯಾತ್ರೆ ತೀವ್ರ ಕುತೂಹಲ ಮೂಡಿಸಿದೆ.

error: Content is protected !!