ಮತ್ತೆ ಹಾಡುವ ಕೋಗಿಲೆ

ಬೆಂಗಳೂರು

ಸಂಗೀತ ಸಾಮ್ರಾಟ್​ ಎಸ್​.ಪಿ ಬಾಲಸುಬ್ರಮಣ್ಯಂ ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಚೇತರಿಕೆ ಕಂಡು ಬರುತ್ತಿದೆ. ಬಹು ಭಾಷೆಯಲ್ಲಿ ಹಾಡುವ ಕೋಗಿಲೆ ಕಂಠ ಸಿರಿಯಲ್ಲಿ ಹಾಡು ಕೇಳಿವ ಭಾಗ್ಯ ಶೋತೃಗಳದ್ದು.
ಎಸ್ಪಿಬಿ ಆರೋಗ್ಯ ಸುಧಾರಣೆ ಸುದ್ದಿ ಸಹಜವಾಗಿಯೇ ಬಾಲು ಕುಟುಂಬ ಮತ್ತು ಅಭಿಮಾನಿಗಳಲ್ಲಿ ಸಂತಸ ತಂದಿದೆ.15 ದಿನಗಳಿಂದ ಹಿಂದೆ ಇದ್ದ ಆತಂಕ ಈಗಿಲ್ಲ. ಅಂದು ಎಸ್ಪಿ ಮಾತು ಕೊಟ್ಟಂತೆ ಮತ್ತೆ ಬಂದು ಹಾಡಲಿದ್ದಾರೆ. ಅಭಿಮಾನಿಗಳ ಪಾರ್ಥನೆ ಮತ್ತು ಆ ದಿವ್ಯಶಕ್ತಿ ಗಾನಗಂಧರ್ವ ಮತ್ತೆ ಎದ್ದು ಬರುವಂತೆ ಮಾಡಿದೆ

ಕೆಲ ದಿನಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಬಾಲು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಅನ್ನೋ ಸುದ್ದಿ ಕೇಳಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು.

ಆಗಸ್ಟ್ 5 ರಂದು ಕೊರೊನಾ ಪಾಸಿಟಿವ್ ಬಂದಿದ್ದ ಕಾರಣ ಎಸ್ ಪಿ ಬಿ ಆಸ್ಪತ್ರೆಗೆ ದಾಖಲಾಗಿದ್ದರು.. ಅಲ್ಲದೇ ಕೊರೊನಾ ದೃಢಪಟ್ಟ ಬಗ್ಗೆ ಸ್ವತಃ ಬಾಲಸುಬ್ರಮಣ್ಯಮ್ ಫೇಸ್ಬುಕ್​ ವೀಡಿಯೋ ಮೂಲಕ ತಿಳಿಸಿದ್ದರು.. ಯಾರು ಆತಂಕ ಪಡುವ ಅಗತ್ಯ ಇಲ್ಲ. ಶೀಘ್ರದಲ್ಲೇ ಗುಣಮುಖನಾಗಿ ಬರ್ತೀನಿ ಅಂತ ಹೇಳಿದರು.
ಎಸ್​​​ಪಿಬಿ ಕೋವಿಡ್​-19 ಸೋಂಕಿಗೆ ತುತ್ತಾಗಿರುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗಿದೆ. ಬೇರೆ ಏನು ಸಮಸ್ಯೆ ಇಲ್ಲ. ಸದ್ಯ ಅವರು ಪ್ರಜ್ಞಾಸ್ಥಿತಿಯಲ್ಲಿದ್ದಾರೆ . ಇತ್ತೀಚೆಗೆ ಪುತ್ರ ಚರಣ್​ ಸಹ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅವರೊಟ್ಟಿಗೆ ಮಾತನಾಡಲು ಎಸ್​​ಪಿಬಿ ಕೈಸನ್ನೆ ಮೂಲಕ ಪ್ರಯತ್ನಿಸಿದ್ದಾರೆ. ಈ ವಿಚಾರವನ್ನ ಚರಣ್​ ಹಂಚಿಕೊಂಡಿದ್ದರು.

ಸಂಗೀತದ ಥೆರಪಿ:
ಎಸ್​​ಪಿಬಿ ಅವರಿಗೆ ಮ್ಯೂಸಿಕ್​ ಥೆರಪಿ ನೀಡುತ್ತಿರುವುದಾಗಿ ಕೆಲ ದಿನಗಳ ಹಿಂದೆ ಮಾಹಿತಿ ಸಿಕ್ಕಿತ್ತು. ಐಸಿಯು ಘಟಕದಲ್ಲಿ ಅವರಿಗೆ ಸದಾ ಅವರೇ ಹಾಡಿರುವ ಭಕ್ತಿಗೀತೆಗಳು, ಸಿನಿಮಾ ಹಾಡುಗಳನ್ನ ಕೇಳಿಸಿ ಮನೋಬಲ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಮ್ಯೂಸಿಕ್​ ಥೆರಪಿ ಕೂಡ ಬಾಲು ಆರೋಗ್ಯ ಸುಧಾರಣೆಗೆ ಶಕ್ತಿ ತುಂಬಿದೆ ಅಂದ್ರೆ ತಪ್ಪಾಗಲ್ಲ. ಸದ್ಯ ಎಸ್​ಪಿಬಿ ಆರೋಗ್ಯ ಸ್ಥಿತಿ ಹೇಗಿದೆ ಅನ್ನೋದನ್ನ ಖುದ್ದು ಪುತ್ರ ಚರಣ್​​, ಹೀಗೆ ಹೇಳಿದ್ದಾರೆ.

ತಂದೆಯವರ ಲಂಗ್ಸ್‌ ಎಕ್ಸ್‌ರೇಯನ್ನು ತೋರಿಸಿದರು. ಅಪ್ಪನ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬರುತ್ತಿದೆ. ಅವರಿಗೆ ಫಿಸಿಯೋಥೆರಪಿ ಮಾಡಲಾಗುತ್ತಿದೆ. ಬಹಳ ಸಮಯದಿಂದ ಮಲಗಿಕೊಂಡೇ ಇದ್ದಿದ್ದರಿಂದ ಒಂದಷ್ಟು ವ್ಯಾಯಾಮಗಳನ್ನು ಮಾಡಿಸಲಾಗುತ್ತಿದೆ. ಅವರ ಉಸಿರಾಟ ಕೂಡ ಉತ್ತಮವಾಗಿದೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದದಿಂದ ಅವರು ಆದಷ್ಟು ಬೇಗ ಸಂಕಷ್ಟದಿಂದ ಹೊರಬರಲಿದ್ದಾರೆ ಬೇಗ ಅವರು ಮನೆಗೆ ಮರಳಲಿದ್ದಾರೆ.

ಒಟ್ಟಾರೆ ಎಸ್​ಪಿಬಿ ಬೇಗ ಗುಣಮುಖರಾಗಬೇಕು, ಮತ್ತಷ್ಟು ಹಾಡುಗಳನ್ನ ಹಾಡಿ ಎಲ್ಲರ ಮನಸ್ಸನ್ನು ತಣಿಸಬೇಕು.
ಮತ್ತೆ ಬಾಲು ಸುಮಧುರ ಗೀತೆಗಳನ್ನ ಕೇಳಲು ಎಲ್ಲರೂ ಸಿದ್ಧರಾಗಿ.

Team Newsnap
Leave a Comment

View Comments

  • ಒಳ್ಳೆಯ ಸುದ್ದಿ ಕೊಟ್ಟಿದೀರ ನಾವೆಲ್ಲ ಅವರು ಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇವೆ

Share
Published by
Team Newsnap

Recent Posts

ಬೆಂಗಳೂರಿನಲ್ಲಿ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು : 10 ವರ್ಷದ ಬಾಲಕಿಗೆ ಚಾಕ್ಲೆಟ್ ಕೊಡಿಸುವುದಾಗಿ ನಂಬಿಸಿ ಕಾಮುಕನೊಬ್ಬ ಅತ್ಯಾಚಾರ ಎಸೆಗಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ… Read More

May 20, 2024

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ : ಸಿಎಂ ಸಿದ್ದು

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಪ್ಲೆಸ್ ಕ್ಲಬ್… Read More

May 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 20 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,400 ರೂಪಾಯಿ ದಾಖಲಾಗಿದೆ. 24… Read More

May 20, 2024

ಪೆನ್ ಡ್ರೈವ್ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ ರಾಜ್ಯದ ಅಭಿವೃದ್ಧಿ

ಪ್ರಕರಣದಿಂದ ಸ್ವಾರ್ಥ ರಾಜಕಾರಣಿಗಳಿಗೆ, ಕೆಲ ಮಾಧ್ಯಮಗಳಿಗೆ, ಗಂಜಿ ಗಿರಾಕಿಗಳಿಗೆ ಮಾತ್ರ ಲಾಭ ?! ಬರಗಾಲದಿಂದ ರಾಜ್ಯದಲ್ಲಿ ಆಗಿರುವ ಅನಾಹುತ ,… Read More

May 20, 2024

ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ

ಕುಂದಾಪುರ : ಮೇ 16 ರ ರಾತ್ರಿ ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ… Read More

May 19, 2024

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024