ಯುವತಿಯೋರ್ವಳು ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಲು ಬಾಂಗ್ಲಾ ದೇಶದಿಂದ ಭಾರತಕ್ಕೆ ನದಿಯಲ್ಲಿ ಈಜಿ ಬಂದಿರುವ ಘಟನೆ ನಡೆದಿದೆ. ಬಾಂಗ್ಲಾದೇಶ ಮೂಲದ ಕೃಷ್ಣ ಮಂಡಲ್ ಹಾಗೂ ಭಾರತ ಮೂಲದ ಅಭಿಕ್ ಮಂಡಲ್ ನಡುವೆ ಪ್ರೇಮ ಹುಟ್ಟಿತ್ತು.
ಫೇಸ್ಬುಕ್ನಿಂದ ಶುರುವಾದ ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು. ಇದೇ ಪ್ರೀತಿ ಅಂತರಾಷ್ಟ್ರೀಯ ಗಡಿ ರೇಖೆ ದಾಟಿಸುವಂತೆ ಮಾಡಿದೆ. ಕೃಷ್ಣ ಮಂಡಲ್ ಬಳಿ ಪಾಸ್ಪೋರ್ಟ್ ಇಲ್ಲದ ಕಾರಣ ಬಾಂಗ್ಲಾದೇಶದಿಂದ ಭಾರತಕ್ಕೆ ನದಿಯಲ್ಲಿ ಈಜಿ ಬರುವ ಪ್ಲಾನ್ ಮಾಡಿದಳು.
ಬಾಂಗ್ಲಾದೇಶದ ಡೇಂಜರಸ್ ಆಗಿರೋ ಹುಲಿಗಳ ಕಾಡು ಅಂತಲೇ ಕರೆಯಲ್ಪಡುವ ಸುಂದರ್ಬನ್ಸ್ ಕಾಡನ್ನು ದಾಟಿದ್ದಾಳೆ. ಅಲ್ಲದೆ ಮಟ್ಲಾದ ನದಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಈಜಿ ಪ್ರಿಯತಮೆ ಕೃಷ್ಣ ಗಡಿ ದಾಟಿದ್ದಾಳೆ. ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಇವರಿಬ್ಬರ ಮದುವೆ ಕೂಡ ನಡೀತು.
ಇದನ್ನು ಓದಿ – ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಗೆ ಗುಡ್ ಬೈ – ಸೋನಿಯಾಗೆ ರಾಜೀನಾಮೆ ಪತ್ರ ರವಾನೆ
ಆದರೆ ಅಕ್ರಮ ಗಡಿ ಪ್ರವೇಶದ ಕಾರಣ ಬಂಗಾಳದ ನರೇಂದ್ರಪುರ ಠಾಣಾ ಪೊಲೀಸರು ಕೃಷ್ಣಳನ್ನು ವಶಕ್ಕೆ ಪಡೆದು. ಮೂಲಗಳ ಮಾಹಿತಿಯ ಅನ್ವಯ, ನಂತರ ಬಾಂಗ್ಲಾದೇಶದ ಕಮಿಷನರ್ಗೆ ಕೃಷ್ಣಳನ್ನು ಹಸ್ತಾಂತರಿಸಿದ್ದಾರೆ.
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ