ಪುನೀತ್​ ಸಮಾಧಿ ಮುಂದೆ ಮದ್ವೆಗೂ ರೆಡಿಯಾದ ಲವ್​ ಬರ್ಡ್ಸ್​ : ದೊಡ್ಮನೆಯಿಂದ ಗ್ರೀನ್​ಸಿಗ್ನಲ್

Team Newsnap
1 Min Read

ಕಂಠೀರವ ಸ್ಟುಡಿಯೋದಲ್ಲಿರುವ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಸಮಾಧಿ ದಶ೯ನಕ್ಕೆ ಮಾತ್ರ ಸೀಮಿತವಾಗದೇ ಮದುವೆಗೂ ಸಾಕ್ಷಿಯಾಗಲಿದೆ.

ಬಳ್ಳಾರಿಯ ಗುರುರಾಜ್ ಹಾಗೂ ಗಂಗಾ ಜೋಡಿ ಪುನೀತ್ ಸಮಾಧಿ ಮುಂದೆ ಮದುವೆಯಾಗೋಕೆ ನಿರ್ಧರಿಸಿದೆ.

ಎರಡು ವರ್ಷದಿಂದ ಪ್ರೀತಿ ಮಾಡುತ್ತಿರುವ ಈ ಜೋಡಿಗಳು ಈಗಾಗಲೇ ಶಿವಣ್ಣ ಹಾಗೂ ರಾಘಣ್ಣರ ಬಳಿ ಅನುಮತಿ ಕೇಳಿದ್ದಾರೆ. ಮದುವೆಯಾಗೋಕೆ ಅನುಮತಿ ಕೊಟ್ಟಿದ್ದಾರೆ ಎನ್ನಲಾಗಿದೆ.

ನಾವಿಬ್ಬರು ಅಪ್ಪು ಅಪ್ಪಟ ಅಭಿಮಾನಿಗಳು. ಅವರ ಅಕಾಲಿಕ ಅಗಲಿಕೆಯಿಂದ ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಈ ರೀತಿ ಸಮಾಧಿ ಮುಂದೆ ಮದುವೆಯಾದರೆ ಅವರಿಗೆ ಗೌರವ ನೀಡಿದ ಹಾಗೇ ಆಗುತ್ತೆ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎನ್ನುತ್ತಾರೆ ಈ ನವ ಜೋಡಿಗಳು.

Share This Article
Leave a comment