‘ಮಂಡ್ಯ ರಮೇಶ್’ ಆರೋಗ್ಯದಲ್ಲಿ ಚೇತರಿಕೆ : ಆಸ್ಪತ್ರೆಯಿಂದ ಡಿಸ್ಚಾರ್ಜ್

Team Newsnap
1 Min Read

ಬೆಂಗಳೂರು : ಹಾಸ್ಯನಟ ‘ಮಂಡ್ಯ ರಮೇಶ್ ‘ಧಾರಾವಾಹಿ ಶೂಟಿಂಗ್ ವೇಳೆ ಅವಘಡ ಸಂಭವಿಸಿ ಗಾಯಗೊಂಡಿದ್ದು, ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ .

ಸೋಮವಾರ ಶೂಟಿಂಗ್ ನಡೆಯುವ ಸಮಯದಲ್ಲಿ ಮಂಡ್ಯ ರಮೇಶ್ ಕೈ, ಹೊಟ್ಟೆಗೆ, ಕಾಲಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು .

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಆಸೆ ಧಾರಾವಾಹಿ ಶೂಟಿಂಗ್ ಕಲ್ಲು ಕ್ವಾರಿಯಲ್ಲಿ ನಡೆಯುತ್ತಿತ್ತು , ಈ ಸಂದರ್ಭದಲ್ಲಿ ಮಂಡ್ಯ ರಮೇಶ್ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ! 

ಇದೀಗ ಗುಣಮುಖರಾದ ಮಂಡ್ಯ ರಮೇಶ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ .

Share This Article
Leave a comment