ಮಂಡ್ಯ ಮೂಲದ ಸಿನಿಮಾ‌ ನಿರ್ದೇಶಕ ನವೀನ್ ಕೊರೋನಾಗೆ ಬಲಿ

Team Newsnap
0 Min Read

ಮಂಡ್ಯದಿಂದ ಸಿನಿಮಾ ರಂಗದಲ್ಲಿ ಯಶಸ್ವಿ ನಿರ್ದೇಶಕನಾಗಿ ಕನಸು ಹೊತ್ತು ಮಂಡ್ಯ ದಿಂದ ಬಂದಿದ್ದ ಯುವ ನಿರ್ದೇಶಕರೊಬ್ಬರು ಕೊರೋನಾ ಗೆ ಬಲಿ ಯಾಗಿದ್ದಾರೆ.‌

ಕನ್ನಡದಲ್ಲಿ ಒನ್​ ಡೇ ಎಂಬ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದ ನವೀನ್​​ (34) ಕೊರೊನಾ ಕಾರಣ ಕೊನೆಯುಸಿರೆಳೆದಿದ್ದಾರೆ.

ಮಂಡ್ಯ ಮೂಲದ ನವೀನ್​ ತಮ್ಮ ನಿರ್ದೇಶನದ ಒನ್​ ಡೇ ಸಿನಿಮಾದಲ್ಲಿ ಅಪ್ಪು ವೆಂಕಟೇಶ್​ ಹಾಗೂ ರೇವಣ್ಣ ನಟಿಸಿದ್ದರು.‌

ಈಗಾಗಲೇ ಈ ಹೆಮ್ಮಾರಿಗೆ ಸ್ಯಾಂಡಲ್​ವುಡ್​ನ ಅನೇಕ ತಂತ್ರಜ್ಞರು, ನಟರು, ನಿರ್ಮಾಪಕರು ಪ್ರಾಣ ತೆತ್ತಿದ್ದಾರೆ, ಇದೀಗ ಈ ಸಾಲಿಗೆ ಯುವ ನಿರ್ದೇಶಕರೊಬ್ಬರು ಸೇರಿದ್ದಾರೆ.

Share This Article
Leave a comment