January 28, 2026

Newsnap Kannada

The World at your finger tips!

, suicide, harrasment , crime

KSRTC ಬಸ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ: ಕೆಲಸದ ಒತ್ತಡ ಕಾರಣ?

Spread the love

ಬೆಳಗಾವಿ: ಕೆಲಸದ ಒತ್ತಡ ಹಾಗೂ ಡ್ಯೂಟಿ ಬದಲಾವಣೆ ಸಂಬಂಧ ದೂರುಗಳ ನಡುವೆ, KSRTC ಮೆಕ್ಯಾನಿಕ್‌ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಡಿಪೋ-1ರ ಅಳ್ನಾವರ್-ಬೆಳಗಾವಿ ಬಸ್‌ನಲ್ಲಿ ಮೆಕ್ಯಾನಿಕ್ ಕೇಶವ ಕಮಡೊಳಿ (57) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬೆಳಗಾವಿಯ ಹಳೆ ಗಾಂಧಿ ನಗರದಲ್ಲಿ ವಾಸವಾಗಿದ್ದರು ಮತ್ತು ಬಸ್‌ಗಳ ವಾಶಿಂಗ್ ಹಾಗೂ ಪಂಚರ್ ತೆಗೆಯುವ ಕೆಲಸ ಮಾಡುತ್ತಿದ್ದರು.

ಮೃತ ಕೇಶವ್‌ಗೆ ಬೆನ್ನು ನೋವಿದ್ದರೂ ಸಹ, ಅಧಿಕಾರಿಗಳು ಅವರನ್ನು ಪಂಚರ್ ತೆಗೆಯುವ ಕೆಲಸಕ್ಕೆ ಒತ್ತಾಯಿಸುತ್ತಿದ್ದರು ಎನ್ನಲಾಗುತ್ತಿದೆ. ಈ ಕುರಿತು ಅವರ ಕುಟುಂಬಸ್ಥರು ಡಿಪೋ ಮ್ಯಾನೇಜರ್ ಲಿಂಗರಾಜ್ ಲಾಠಿ ಹಾಗೂ ಸಹಾಯಕ ಕಾರ್ಯ ಅಧೀಕ್ಷಕ ಅನಿಲ್ ಬಾಂದೇಕರ್‌ಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ.

ಕೆಲಸದ ಒತ್ತಡವನ್ನು ಸಹಿಸಲಾಗದೆ ಕೇಶವ್ ಆತ್ಮಹತ್ಯೆ ಮಾಡಿಕೊಂಡಿರುವುದು ಶಂಕೆಗೆ ಕಾರಣವಾಗಿದ್ದು, ಅವರ ಕುಟುಂಬಸ್ಥರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!