ಲವ್​ ಯು ರಚ್ಚು ಚಿತ್ರ :ಪೈಟರ್ ದುರಂತ ಸಾವಿನ‌ ಪ್ರಕರಣ – ಮೂವರ ಬಂಧನ – ಇಬ್ಬರು ನಾಪತ್ತೆ

Team Newsnap
1 Min Read

ಲವ್​ ಯು ರಚ್ಚು ಚಿತ್ರದ ಶೂಟಿಂಗ್ ವೇಳೆ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ
ಬಿಡದಿ ಪೊಲೀಸರು ಐವರ ವಿರುದ್ಧ ದೂರು ದಾಖಲಿಸಿ, ಎಫ್​​ಐಆರ್​​ ಹಾಕಿದ್ದಾರೆ.

ಬಿಡದಿಯ ಜೋಗನಪಾಳ್ಯದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ 11 ಕೆವಿ ವಿದ್ಯುತ್ ತಂತಿ ತಗುಲಿ ಫೈಟರ್ ಅಸಿಸ್ಟೆಂಟ್ ವಿವೇಕ್ ಎಂಬುವರು ಸಾವನ್ನಪ್ಪಿದರು.

ಬಿಡದಿ ಪೊಲೀಸರು ನಿನ್ನೆಯೇ​ ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ನಂತರ
ವಿವೇಕ್ ಕುಟುಂಬದವರೂ ನೀಡಿದ್ದ ದೂರಿನ ಆನ್ವಯ ಪ್ರಕರಣದಲ್ಲಿ​ ನಿರ್ದೇಶಕ ಶಂಕರ್ ರಾಜ್, ನಿರ್ಮಾಪಕ ಗುರುದೇಶ ಪಾಂಡೆ , ಸಾಹಸ ನಿರ್ದೇಶಕ ವಿನೋದ್ , ಸಿನಿಮಾ ಇನ್​​​ಚಾರ್ಜ್​​ ಪರ್ನಾಂಡೀಸ್, ಕ್ರೇನ್ ಚಾಲಕ ಆಪರೇಟರ್ ಮಹೇದವ್ ಅರೋಪಿಗಳಾಗಿದ್ದಾರೆ.

ಐವರು ಆರೋಪಿಗಳ ವಿರುದ್ಧ 304, 337, 149 ಅಡಿಯಲ್ಲಿ ಬಿಡದಿ ಪೊಲೀಸರು ಎಫ್​​ಐಆರ್​​ ದಾಖಲಿಸಿಕೊಂಡಿದ್ದಾರೆ.

ಮೂವರನ್ನು ಬಂಧಿಸಲಾಗಿದೆ. ಇಬ್ಬರಿಗಾಗಿ ಶೋಧನೆ ಮುಂದುವರೆದಿದೆ.

ವಿದ್ಯುತ್ ತಂತಿ ಸ್ಪರ್ಶದಿಂದ ತಮಿಳುನಾಡು ಮೂಲಕದ ಫೈಟರ್​​ ವಿವೇಕ್(28) ಸಾವನ್ನಪ್ಪಿದ್ದರು
ಜೊತೆಗೆ ಮತ್ತೊಬ್ಬ ಫೈಟರ್ ರಂಜಿತ್ ಎಂಬಾತನಿಗೂ ವಿದ್ಯುತ್ ತಗುಲಿ ಗಂಭೀರ ಗಾಯವಾಗಿದೆ.

Share This Article
Leave a comment