ಹನೂರು: ತಾಲೂಕಿನ ನಾಲ್ ರೋಡ್ ಗ್ರಾಮದ ನಿವಾಸಿ ಮಾರ್ಟಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಚಿನ್ನಮ್ಮನ ಮನೆಯಲ್ಲೇ ಚಿನ್ನಾಭರಣ ದೋಚಿದ ಘಟನೆ ಜರುಗಿದೆ.
ಕುಮಾರ್ ತನ್ನ ಒಡಹುಟ್ಟಿದ ಅಕ್ಕನ ಮನೆಯಲ್ಲೆ 150 ಗ್ರಾo ಚಿನ್ನ 6 ಲಕ್ಷ ನಗದು ಲೂಟಿ ಮಾಡಿ ಕಳೆದ 14 ದಿನಗಳಿಂದ ತಲೆಮಾರೆಸಿಕೊಂಡಿದ್ದನು ಇದೀಗ ಪೋಲೀಸರು ಆತನನ್ನು ಬಲೆ ಬೀಸಿ ಬಂಧಿಸಿದ್ದಾರೆ.
ನಾಲ್ ರೋಡ್ ಗ್ರಾಮದ ಚಿನ್ನಮ್ಮ ಎಂಬುವವರು ಜುಲೈ 23 ರಂದು ತಮಿಳುನಾಡಿಗೆ ಕಾರ್ಯನಿಮಿತ್ತ ತೆರಳಿದ್ದರು. ಕೆಲಸ ಮುಗಿಸಿ ಜುಲೈ 27ರಂದು ಗ್ರಾಮಕ್ಕೆ ಆಗಮಿಸಿದ ಚಿನ್ನಮ್ಮನವರು ಮನೆಯಲ್ಲಿ ಚಿನ್ನ ಹಾಗೂ ನಗದು ಕಳುವಾಗಿರುವ ವಿಚಾರ ತಿಳಿದು ಈ ಬಗ್ಗೆ ಅದೇ ದಿನ ರಾಮಪುರ ಪೊಲೀಸರಿಗೆ ದೂರು ನೀಡಿದರು.
ರಾಮಪುರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ಪರಾರಿಯಾಗಿದ್ದವನ ಪತ್ತೆ ಮಾಡಲು ಬಲೆ ಬೀಸಿದ್ದರು. ಆಗಸ್ಟ್ 10ರಂದು ಪರಾರಿಯಾಗಿದ್ದ ಕಳ್ಳನನ್ನು ಬಂಧಿಸಿ ಬಂದಿತನಿಂದ 150 ಗ್ರಾಂ ಚಿನ್ನ ಹಾಗೂ ಆರು ಲಕ್ಷ ನಗದನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಲೋಕಾ ಕೈಗೆ ಸಿಕ್ಕಿ ಹಾಕಿಕೊಂಡರೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ; ಸಂಪುಟದ ಒಪ್ಪಿಗೆ
ಕಾರ್ಯಾಚರಣೆಯಲ್ಲಿ ರಾಮಪುರ ಪಿಎಸ್ಐ ರಾಧಾ, ಎಎಸ್ಐ ಗುರುಸ್ವಾಮಿ, ಅಪರಾಧ ವಿಭಾಗದ ಮುಖ್ಯಪೇದೆಗಳಾದ ಸಿದ್ದೇಶ್ ಕುಮಾರ್, ನಾಗೇಂದ್ರ, ಗಿರೀಶ್, ಮಂಜು ಲಿಯಾಖತ್ ಅಲಿಖಾನ್, ಪರಶುರಾಮ್ ಪೇದಗಳಾದ ಮಹೇಂದ್ರ ಬಿರಾದಾರ್ ಪಾಲ್ಗೊಂಡಿದ್ದರು.
ವರದಿ :- ನಾಗೇಂದ್ರ ಪ್ರಸಾದ್
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು