ಲೋಕಸಭಾ ಚುನಾವಣೆ :ಬೀದಿಗಿಳಿದ ಪ್ರತಾಪ್ ಸಿಂಹ ಅಭಿಮಾನಿಗಳು

Team Newsnap
1 Min Read

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಲೋಕಸಭ ಚುನಾವಣೆಯ ಟಿಕೆಟ್ ಕೈತಪ್ಪುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಬೆಂಬಲಿಗರು ಮೈಸೂರಿನಲ್ಲಿ ಪ್ರತಿಭಟನೆ ನಡೆಸುತಿದ್ದಾರೆ.

ನಗರದ ಹಿನಕಲ್ ಫ್ಲೈ ಓವರ್ ಬಳಿ ಸಂಸದ ಪ್ರತಾಪ್ ಸಿಂಹ ಅವರ ಬೆಂಬಲಿಗರು ಮೈಸೂರು ಕೊಡಗು ಕ್ಷೇತ್ರದಿಂದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.

pratap simha

ಇದನ್ನು ಓದಿ –ಮಾಧ್ಯಮಗಳನ್ನು ನಾಯಿಗೆ ಹೋಲಿಸಿದ ಹೆಗಡೆ ಸಾರ್ವಜನಿಕ ಕ್ಷಮೆಗೆ ಕೆಯುಡಬ್ಲ್ಯುಜೆ ಒತ್ತಾಯ

ಪ್ರತಿಭಟನಾಕಾರರು ದೇಶಕ್ಕಾಗಿ ಮೋದಿ, ಮೈಸೂರಿಗೆ ಪ್ರತಾಪ್ ಸಿಂಹ, ಪ್ರತಾಪ್ ಸಿಂಹ ಬೇಕೇ ಬೇಕು ಎಂದು ಘೋಷಣೆ ಕೂಗಿದ್ದು , ಇಂದು ಪ್ರತಾಪ್ ಸಿಂಹ ಪರ ಬೆಂಬಲಿಗರು ಸಾಲು ಸಾಲಾಗಿ ಪ್ರತಿಭಟನೆ ಕೈಗೊಂಡಿದ್ದಾರೆ.

Share This Article
Leave a comment