Editorial

ಬದುಕೊಂದು ಚಿಕ್ಕ ಸಮಯದ, ದೀರ್ಘ ಅವಧಿಯ ಹೋರಾಟ….

ಬದುಕೊಂದು ದೂರದ ಪಯಣ.
ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ……

Life is Short ,
Make it Sweet…….

ಈ ಎರಡು ವಿಭಿನ್ನ ಹೇಳಿಕೆಗಳನ್ನು ಗಮನಿಸಿ.

ಒಂದು ಬದುಕನ್ನು ದೀರ್ಘ ಅವಧಿಯ ಹೋರಾಟ ಎಂದು ಹೇಳಿದರೆ ಮತ್ತೊಂದು ಬದುಕು ತುಂಬಾ ಚಿಕ್ಕ ಸಮಯದ್ದು ಎಂಬ ಅರ್ಥ ಕೊಡುತ್ತದೆ.

ಹಾಗಾದರೆ ಬದುಕು ದೀರ್ಘವೇ ಅಥವಾ ಕಡಿಮೆ ಸಮಯವೇ ?.

ಭಾರತದ ಈಗಿನ ಸರಾಸರಿ ಆಯಸ್ಸು ಅಧಿಕೃತವಾಗಿ ಸುಮಾರು 63/65 ರ ಆಸುಪಾಸಿನಲ್ಲಿ ಇದೆ. ಅದನ್ನು ಸುಮಾರು 75 ಎಂದು ಭಾವಿಸಿಕೊಳ್ಳೋಣ.

75 ವಯಸ್ಸು ಕೆಲವರಿಗೆ ದೀರ್ಘ ಮತ್ತೆ ಕೆಲವರಿಗೆ ಕಡಿಮೆ ಅದು ಅವರವರ ಜೀವನ ಶೈಲಿ ಮತ್ತು ಮನೋಭಾವ ಅವಲಂಬಿಸಿರುತ್ತದೆ ಎಂದು ಲೋಕಾಭಿರಾಮವಾಗಿ ಹೇಳಬಹುದು.

ಆದರೆ ವಾಸ್ತವ ಏನು. ನಾವು ಬದುಕನ್ನು ದೀರ್ಘವೆಂದು ಪರಿಗಣಿಸಬೇಕೆ ಅಥವಾ ಸಣ್ಣ ಅವಧಿ ಎಂದು ಭಾವಿಸಬೇಕೆ ?

ನನ್ನ ದೃಷ್ಟಿಯಲ್ಲಿ ಬದುಕೊಂದು ದೀರ್ಘ ಪಯಣ. ಜೀವನದಲ್ಲಿ ನಮ್ಮ ಬಳಿ ತುಂಬಾ ತುಂಬಾ ಸಮಯವಿದೆ. ಹುಟ್ಟಿನಿಂದ ಸಾಯುವವರೆಗೆ ಸುಮಾರು ಮುಕ್ಕಾಲು ಶತಮಾನದಷ್ಟು ದೂರದ ಹಾದಿ ಇದೆ.

ನಮ್ಮ ಆಸೆ ಆಕಾಂಕ್ಷೆಗಳು, ಕನಸುಗಳು, ಸವಾಲುಗಳು, ಪ್ರಯೋಗಗಳು, ಸೋಲಿನ ಕುಸಿತ, ಗೆಲುವಿನ ಮೆಟ್ಟಿಲು…….. ಎಲ್ಲವನ್ನೂ ನಿಭಾಯಿಸಲು ಸಾಕಷ್ಟು ಸಮಯವಿರುತ್ತದೆ. ಹಣದ ಕೊರತೆ, ಪ್ರೇಮ ವೈಫಲ್ಯ, ಕೌಟುಂಬಿಕ ವಿಭಜನೆ, ನೈಸರ್ಗಿಕ ವಿಕೋಪ, ವ್ಯವಸ್ಥೆಯ ಶೋಷಣೆ, ನಿರಂತರ ಸೋಲು ಎಲ್ಲವನ್ನು ಎದುರಿಸಲು, ಅನುಭವಿಸಲು ಮತ್ತೆ ಕಟ್ಟಲು ನಮ್ಮ ಬಳಿ ಕಾಲವಿದೆ.

ಇದಕ್ಕೆ ಪ್ರತಿಯಾಗಿ,
ಜೀವನದ ಕಾಲ ತುಂಬಾ ಕಡಿಮೆ ಇದೆ ಎಂದು ಭಾವಿಸಿದಲ್ಲಿ ನಮ್ಮ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇರುವ ಸ್ವಲ್ಪ ಸಮಯದಲ್ಲಿ ಎಲ್ಲವನ್ನೂ ಮಾಡಲು ಹೋಗಿ ಬದುಕಿನ ಸ್ವಾರಸ್ಯವನ್ನೇ ಕಳೆದುಕೊಳ್ಳುತ್ತೇವೆ.

ಬೆಳಗಿನಿಂದ ರಾತ್ರಿಯವರೆಗೆ ವರ್ಷದ 365 ದಿನವೂ ಕೆಲಸದ ಒತ್ತಡಕ್ಕೆ ಸಿಲುಕಿ ನೆಮ್ಮದಿಗಾಗಿ ಹುಡುಕಾಡುವ ಸಾಧ್ಯತೆಯೇ ಹೆಚ್ಚು. ಮಧ್ಯಮ ವರ್ಗದವರಂತೂ ಸ್ವಂತ ಮನೆ, ಮಕ್ಕಳ ಶಿಕ್ಷಣ ಮತ್ತು ಮದುವೆ, ಕಾರು ಅದು ಇದು ಎಂದು ಇಡೀ ಜೀವನ ಅದಕ್ಕಾಗಿಯೇ ಮುಡುಪಿಡುತ್ತಾರೆ. ಭೌತಿಕ ವಸ್ತುಗಳ ಹುಡುಕಾಟವೇ ಜೀವನ ಎಂಬಂತಾಗಿದೆ.

ಅದರಲ್ಲೂ ಈ ಆಧುನಿಕ ವೇಗದ ಯುಗದಲ್ಲಿ ಸಮಯ ಸರಿಯುವುದೇ ತಿಳಿಯುವುದಿಲ್ಲ. ದಿನನಿತ್ಯದ ಒತ್ತಡದಲ್ಲಿ ತಿಂಗಳು – ವರ್ಷಗಳು ಬೇಗ ಬೇಗ ಸಾಗಿದಂತೆನಿಸುತ್ತದೆ.

ಅವಶ್ಯಕತೆಗಳು ಹೆಚ್ಚಾದಂತೆ,
ಆ ಅವಶ್ಯಕತೆಗಳೇ ಅನಿವಾರ್ಯಗಳಾಗಿ,
ಆ ಅನಿವಾರ್ಯವಾಗಳೇ ಬದುಕಿನ ಭಾಗಗಳಾಗಿ,
ಆ ಭಾಗಗಳನ್ನು ಪೂರೈಸಿಕೊಳ್ಳುವುದೇ ಜೀವನದ ಉದ್ದೇಶಗಳಾಗಿ,
ಆ ಉದ್ದೇಶಗಳಿಗಾಗಿಯೇ ಸಮಯವನ್ನು ಮೀಸಲಿಡಬೇಕಾಗಿರುವುದರಿಂದ ಜೀವನದ ಸಮಯ ತುಂಬಾ ಕಡಿಮೆಯಾಗಿದೆ ಎಂದು ಭಾಸವಾಗುತ್ತದೆ.
ನಾವುಗಳ ಅದರಲ್ಲಿಯೇ ಕಳೆದು ಹೋಗುತ್ತಿದ್ದೇವೆ.

ಬದುಕನ್ನು ಒಂದು ನದಿಗೆ ಹೋಲಿಸಬಹುದು. ನದಿ ಹುಟ್ಟಿ ಸಮುದ್ರ ಸೇರುವವರೆಗೆ ದೀರ್ಘವಾಗಿ ಮತ್ತು ನಿರಂತರವಾಗಿ ಚಲಿಸುತ್ತಿರುತ್ತದೆ. ಆ ಹಾದಿಯಲ್ಲಿ ಕೆಲವೊಮ್ಮೆ ವಿಶಾಲವಾಗಿ, ಮತ್ತೆ ಕೆಲವು ಸಲ ಇಕ್ಕಟ್ಟಾದ ಜಾಗದಲ್ಲಿ, ಹಲವೊಮ್ಮೆ ರಭಸದಿಂದ, ಮತ್ತೆ ಪ್ರಶಾಂತತೆಯಿಂದ ಅನೇಕ ಎಡರು ತೊಡರುಗಳನ್ನು ಎದುರಿಸಿ ಸಾಗುತ್ತದೆ.
ಕೆಲವೊಮ್ಮೆ ಮನುಷ್ಯ ಪ್ರಾಣಿ ತನ್ನ ಸ್ವಾರ್ಥಕ್ಕಾಗಿ ಅಣೆಕಟ್ಟು ಕಟ್ಟಿ ಅದನ್ನು ಬಂಧಿಸುತ್ತಾನೆ. ಆಗಲೂ ನದಿ ಸಮುದ್ರ ಸೇರುವ ತವಕದಿಂದ ತನ್ನ ಸಮಯಕ್ಕೆ ಕಾಯುತ್ತದೆ ಅದು ಎಷ್ಟೇ ದೀರ್ಘ ಸಮಯವಾದರೂ ಬದುಕನ್ನು ಹೀಗೆ ಎಂದು ನಿರ್ಧರಿಸುವುದು ಕಷ್ಟ. ಆದರೆ ಜೀವನವನ್ನು ಆಗಾಗ ಪುನರ್ ವಿಮರ್ಶೆಗೆ ಒಳಪಡಿಸಿ ನೆಮ್ಮದಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರಬೇಕು. ಏಕೆಂದರೆ ಬದುಕೊಂದು ಸುದೀರ್ಘ ಪಯಣ ಅನಂತದೆಡೆಗೆ.

  • ವಿವೇಕಾನಂದ. ಹೆಚ್.ಕೆ
Team Newsnap
Leave a Comment
Share
Published by
Team Newsnap

Recent Posts

ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ

ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More

May 14, 2024

ರೇವಣ್ಣ ರಿಲೀಸ್ : ಬಿಗ್ ರಿಲೀಪ್

ಐದು ದಿನಗಳ ಜೈಲು ವಾಸಕ್ಕೆ ಅಂತ್ಯ ⁠5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More

May 13, 2024

ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ

ಬೆಂಗಳೂರು : ಪ್ರಜ್ವಲ್‌ ರೇವಣ್ಣ ವಿಚಾರದ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್‌ನಲ್ಲಿ ಸಂತ್ರಸ್ತೆ… Read More

May 13, 2024

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್

ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More

May 13, 2024

CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More

May 13, 2024

ರಾಜ್ಯದಾದ್ಯಂತ ಮುಂದಿನ 5 ದಿನ ಭಾರಿ ಮಳೆ

ಬೆಂಗಳೂರು : ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ… Read More

May 13, 2024