ಮಂಡ್ಯದಲ್ಲಿ ರೈತನ ಮೇಲೆ ಚಿರತೆ ದಾಳಿ

Team Newsnap
1 Min Read

ಮಂಡ್ಯ: ಹೊಲದಲ್ಲಿ ಕೆಲಸ ಮಾಡುತ್ತಿದ್ದಂತ ರೈತನ ಮೇಲೆ ದಾಳಿ ನಡೆಸಿ, ಮೇಕೆಯನ್ನು ಹೊತ್ತೊಯ್ದಿರುವ ಘಟನೆ ಮಂಡ್ಯ ಜಿಲ್ಲೆಯ ಚಾಮನಹಳ್ಳಿಯಲ್ಲಿ ನಡೆದಿದೆ.

ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ತಮ್ಮ ಹೊಲದಲ್ಲಿ ರೈತ ಶಶಿಕುಮಾರ್ ಕೆಲಸ ಮಾಡುತ್ತಿದ್ದ ವೇಳೆ ಚಿರತೆಯೊಂದು ಅವರ ಮೇಲೆ ದಾಳಿ ನಡೆಸಿ , ಸಾಕಿದ್ದಂತ ಮೇಕೆಯನ್ನು ಹೊತ್ತೊಯ್ದಿರುವುದಾಗಿ ತಿಳಿದು ಬಂದಿದೆ.

2 ಚಿರತೆಗಳು ಭತ್ತದ ಗದ್ದೆಯಲ್ಲಿ ಬೀಡು ಬಿಟ್ಟಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.

ಚಿರತೆ ಇಂದು ಮಧ್ಯಾಹ್ನ ಜಮೀನಿನ ಕೆಲಸ ಮಾಡುವಾಗ ರೈತ ಶಶಿಕುಮಾರ್ ಮೇಲೆ ದಾಳಿ ನಡೆಸಿ ,ಮೇಕೆಯನ್ನು ಹೊತ್ತೊಯ್ದ ಕಾರಣ, ರೈತ ಪ್ರಾಣಾಪಾಯದಿಂದ ಪಾರಾಗಿದ್ಧಾನೆ .

2 ಚಿರತೆಗಳು ಭತ್ತದ ಗದ್ದೆಯಲ್ಲಿ ಬೀಡು ಬಿಟ್ಟಿರುವುದರಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ ಮತ್ತು ಸೆರೆಗೆ ಒತ್ತಾಯಿಸಿದ್ದಾರೆ.ಮೆಟ್ರೋ ಮಾದರಿಯಲ್ಲಿ ಮೈಸೂರು ಬೆಂಗಳೂರು ನಡುವೆ ಪ್ರತಿ 10 ನಿಮಿಷಕ್ಕೊಮ್ಮೆ ರೈಲು

ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆ ದಾಳಿ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

Share This Article
Leave a comment