ಮೈಸೂರಿನಲ್ಲಿ ವಕೀಲೆ ಅನುಮಾನಸ್ಪದ ಸಾವು – ಗಂಡ ಮಾವ ವಶಕ್ಕೆ. : ಅತ್ತೆ ಪರಾರಿ

Team Newsnap
1 Min Read

ಮೈಸೂರಿನ ರಾಮಕೃಷ್ಣ ನಗರದ ವಕೀಲೆಯೊಬ್ಬರು ಅನುಮಾನಾಸ್ಪದವಾಗಿ‌ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗಿನ ಜರುಗಿದೆ. ಚಂದ್ರಕಲಾ (32) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು.

ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರೂ ಇದೊಂದು ಆತ್ಮಹತ್ಯೆಯಲ್ಲ ಕೊಲೆ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ.

ರಾಮಕೃಷ್ಣ ನಗರ ನಿವಾಸಿ ವಿಚ್ಛೇದಿತ ಪ್ರದೀಪ್ ಎಂಬ ವ್ಯಕ್ತಿಯನ್ನು 2019 ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಆರು ತಿಂಗಳ ಒಂದು ಮಗು ಕೂಡ ಇತ್ತು.

ಮೃತ ಚಂದ್ರಕಲಾ ಪತಿ ಪ್ರದೀಪ್ ಆಕೆಯ ಪೋಷಕರಿಗೆ ಇಂದು ಬೆಳಗಿನ ಜಾವ ಕರೆ ಮಾಡಿ ಆಸ್ಪತ್ರೆ ಬಳಿ ಬರುವಂತೆ ತಿಳಿಸಿದರು.

ವರದಕ್ಷಿಣೆ ದಾಹಕ್ಕೆ ತಮ್ಮ ಮಗಳು ಬಲಿಯಾಗಿದ್ದಾಳೆ. ಚಂದ್ರಕಲಾ ಸಾವಿಗೆ ಆಕೆಯ ಗಂಡ ಅತ್ತೆ ಮಾವ ಕಾರಣ ಎಂದು ಪೋಷಕರು ಕುವೆಂಪು ನಗರ ಪೋಲಿಸರಿಗೆ ದೂರು ನೀಡಿದ್ದಾರೆ.

ಠಾಣೆ ಇನ್ಸ್ ಪೆಕ್ಟರ್ ಚಂದ್ರಕಲಾ ಗಂಡ – ಮಾವನನ್ನು ವಶ ಪಡೆದಿದ್ದಾರೆ ಅತ್ತೆ ಪರಾರಿಯಾಗಿದ್ದಾಳೆ.

Share This Article
Leave a comment