KUWJ ನೂತನ ಅಧ್ಯಕ್ಷ ಶಿವಾನಂದ ತಗಡೂರುರಿಗೆ ಕೋಡಿಮಠದಲ್ಲಿ ಅದ್ದೂರಿ ಸನ್ಮಾನ

Team Newsnap
0 Min Read

ಅರಸೀಕೆರೆ ತಾಲೂಕಿನ ಕೋಡಿಮಠದಲ್ಲಿ ನಡೆದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿರುವ ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಅವರನ್ನು ಸನ್ಮಾನಿಸಿದರು.

ಶಿವಮೊಗ್ಗ ಬೆಕ್ಕಿನ ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬೆಳಗಾವಿ ನಿಡಸೂಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹಾನಗಲ್ ನ ಶಿವಯೋಗಿ ಸ್ವಾಮೀಜಿ, ಜಡೆಮಠದ ಡಾ.ಮಹಾಂತ ಸ್ವಾಮೀಜಿ, ಮೃತ್ಯುಂಜಯ ಸಂಕೇಶ್ವರ್ ಅವರು ಹಾಜರಿದ್ದರು.

Share This Article
Leave a comment