ಕುಂಬಳಗೋಡಿಲ್ಲಿ ಭಾರಿ ದುರಂತ : ಜಲ್ಲಿ ಕಲ್ಲು ಲಾರಿ ಮೊಗಚಿ 6 ಮಂದಿ ಸಾವು

Team Newsnap
1 Min Read

ಬೆಂಗಳೂರು – ಮೈಸೂರು ರಸ್ತೆಯ ಕುಂಬಳಗೋಡು ಹೊರವಲಯದಲ್ಲಿ ಜಲ್ಲಿ ಕಲ್ಲು ಲಾರಿ , ಕಾರು , ಬೈಕ್ ಮೇಲೆ ಮೊಗಚಿ ಬಿದ್ದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದಾರೆ.

(kA 02- MM 7749) ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಿಖಿತಾ ರಾಣಿ (29) ವೀಣಮ್ಮ( 42) ಇಂದ್ರಕುಮಾರ್
(14) ಕೀತಿ೯ ಕುಮಾರ್ (40) ಅಲ್ಲದೆ ಮತ್ತೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ (K A 05-M J 9924) ಶಿವಪ್ರಕಾಶ್ ಹಾಗೂ ಬೈಕ್ ನಲ್ಲಿದ್ದ ಜಿತಿನ್ ಬಿ ಜಾರ್ಜ್ ಸತ್ತವರೆಂದು ಗುರುತಿಸಲಾಗಿದೆ. ಲಾರಿ ಅಡಿಯಲ್ಲಿ ಇನ್ನೂ ಕೆಲವರು ಸಿಲುಕಿರುವ ಶಂಕೆ ಇದೆ.

ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಇನ್ನೋರ್ವನ ಸ್ಥಿತಿ ಗಂಭಿರವಾಗಿ ಆತ ಕೂಡ ಕೆಲ ಹೊತ್ತಿನ ಬಳಿಕ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಈ ದುರಂತಕ್ಕೆ ರಸ್ತೆ ಕಾಮಗಾರಿಯೇ ಕಾರಣ ಎನ್ನಲಾಗಿದೆ. ಕುಂಬಳಗೊಡು ಪೊಲೀಸರು ಸ್ಥಳದಲ್ಲಿ ಪರಿಶೀಲನೆ ಮುಂದುವರೆಸಿದ್ದಾರೆ.

Share This Article
Leave a comment