ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಕೊಪ್ಪಳದಲ್ಲಿ 5 ಕೋಟಿ ರು.ವೆಚ್ಚದಲ್ಲಿ ಆಟಿಕೆ ತಯಾರಿಕಾ ಉದ್ಯಮವೊಂದು ತಲೆ ಎತ್ತಲಿದೆ.
ದೇಶದಲ್ಲೇ ಪ್ರಥಮ ಎನ್ನಬಹುದಾದ ಬೃಹತ್ ಆಟಿಕೆ ಉದ್ಯಮದ ಘಟಕವೊಂದನ್ನು ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿದ್ದತೆ ಮಾಡುತ್ತಿವೆ. ಈ ಮೂಲಕ ಉದ್ಯೋಗ ಸೃಷ್ಠಿ ಹಾಗೂ ಸ್ವಾವಲಂಬನೆ ಭಾರತ ಕಟ್ಟುವ ಹೊಸ ಹೆಜ್ಜೆಗಳು ಆರಂಭವಾದಂತಾಗಿವೆ.
ಕಳೆದ ಮಾರ್ಚ ಇಂದ ದೇಶವನ್ನು ವಿಪರೀತವಾಗಿ ಬಾಧಿಸುತ್ತಿರುವ ಕೊರೋನಾ ಮಾಹಾಮಾರಿಯಿಂದಾಗಿ ದೇಶದ ಆರ್ಥಿಕ ಸ್ಥಿತಿ ಅಧೋಗತಿಯ ಹಂತ ತಲುಪಿದೆ. ಉದ್ಯೋಗ ಕಳೆದು ಕೊಂಡು ಲಕ್ಷಾಂತರ ಜನ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ದೇಶವನ್ನು ಸ್ವ ಸ್ವಾಮರ್ಥದಿಂದ ಕಟ್ಟಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಆತ್ಮ ನಿರ್ಭರತೆಯನ್ನು ಸಾಧಿಸಲು ಹೊಸ ಸಂಕಲ್ಪ ಮಾಡಿ, ಚೀನಾ ದೇಶಕ್ಕೆ ಒಳ ಏಟು ನೀಡಲು ಮುಂದಾಗಿದೆ.
ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಆಟಿಕೆ, ಎಲೆಕ್ಟ್ರಾನಿಕ್ಸ್ ಸೇರಿದಂತೆ ಚೀನಾದ ವಸ್ತುಗಳ ಮೇಲೆ ಸಾಕಷ್ಟು ಅವಲಂಬಿತವಾಗಿದ್ದವು. ಇಡೀ ಪ್ರಪಂಚಕ್ಕೆ ಕೊರೋನಾ ವೈರಸ್ ಹರಡುವಂತೆ ಮಾಡಿ ವಿಶ್ವವನ್ನು ತಲ್ಲಣಗೊಳಿಸಿದ ಚೀನಾಗೆ ಬುದ್ದಿ ಕಲಿಸುವ ಮೂಲಕ ಪರೋಕ್ಷವಾಗಿ ಆಂತರ್ ಯುದ್ಧ ಆರಂಭಿಸಿದ ಭಾರತ ಈಗ ಸ್ವಾವಲಂಬನೆಯ ಹೆಜ್ಜೆ ಇಡಲು ಆರಂಭಿಸಿದೆ.
ಬೊಂಬೆ ಪಟ್ಟಣ ಎಂದೇ ಖ್ಯಾತಿಯಾಗಿರುವ ಚನ್ನಪಟ್ಟಣದ ಗೊಂಬೆಗಳು ತುಂಬಾ ಫೇಮಸ್. ಸ್ಥಳೀಯವಾಗಿ ಗುಡಿ ಕೈಗಾರಿಕೆ ಮೂಲಕ ಗೊಂಬೆಗಳನ್ನು ತಯಾರಿಕೆ ಮಾಡಿ ಮಾರಾಟ ಮಾಡುವ ಈ ಉದ್ಯಮ ಅನೇಕರಿಗೆ ಉದ್ಯೋಗ ನೀಡಿದೆ. ಇಡೀ ದೇಶಕ್ಕೆ ಸಾಕಾಗುಷ್ಟು ಗೊಂಬೆಗಳನ್ನು ತಯಾರಿಸುವುದು ಚನ್ನಪಟ್ಟಣದಲ್ಲಿ ಅಸಾಧ್ಯದ ಮಾತು. ಆದರೆ ಸ್ಥಳೀಯ ಬೇಡಿಕೆಯನ್ನು ಅಲ್ಲಿನ ಸಣ್ಣ ಪುಟ್ಟ ಉದ್ದಿಮೆಗಳು ಪೂರೈಕೆ ಮಾಡುತ್ತವೆ.
ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಪ್ಪಳದಲ್ಲಿ 5 ಸಾವಿರ ಕೋಟಿ ರು ವೆಚ್ಚದಲ್ಲಿ ಆಟಿಕೆ ಉದ್ಯಮ ಘಟಕ ಆರಂಭಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿವೆ.
* 2023 ರ ವೇಳೆಗೆ ಈ ಉದ್ಯಮದಿಂದ ಅಂದಾಜು 2,300 ಕೋಟಿ ರು ಆದಾಯ ನಿರೀಕ್ಷೆ ಹೊಂದಲಾಗಿದೆ.
ದೇಶದ ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ರೆಡಿಯೋ ಕಾರ್ಯಕ್ರಮದಲ್ಲಿ ಈ ಕುರಿತಂತೆ ವಿವರಣೆ ನೀಡಿ, ಜಾಗತಿಕ ಆಟಿಕೆ ಉದ್ಯಮದಲ್ಲಿ ಭಾರತದ ಪಾಲು ಕೇವಲ
7 ಲಕ್ಷ ಕೋಟಿ ರು ಮಾತ್ರ ಆಗಿದೆ. ಇದು ಬಹಳ ಕಡಿಮೆ. ನಾವು ಭಾರತವನ್ನು ಜಾಗತೀಕ ಆಟಿಕೆ ತಯಾರಿಕಾ ಕೇಂದ್ರವನ್ನಾಗಿ ಮಾಡುವ ಸಂಕಲ್ಪ ಮಾಡಬೇಕಿದೆ. ಈ ಕಾರಣಕ್ಕಾಗಿ ಒಗ್ಗೂಡಿ ಕೆಲಸ ಮಾಡಬೇಕು. ಸಣ್ಣ ಉದ್ದಿಮೆಗಳಿಗೆ ಬಲ ತುಂಬುವ ಅನಿವಾರ್ಯತೆಯೂ ಇದೆ ಎಂದು ಹೇಳಿದ್ದರು.
ರಾಹುಲ್ ಗಾಂಧಿ ಟೀಕೆ
ಪ್ರಧಾನ ಮಂತ್ರಿ ಮೋದಿ ಜೆಇಇ ಮತ್ತು ನೀಟ್ ಪರೀಕ್ಷೆಗಳ ಬಗ್ಗೆ ಚರ್ಚೆ ಮಾಡಬೇಕು, ಆಟಿಕೆ ವಸ್ತುಗಳ ಬಗ್ಗೆ ಚರ್ಚೆ ಸಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ. ರಾಹುಲ್ ಮಾಡಿರುವ ಟ್ವೀಟ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡು, ಪ್ರಧಾನಿಗಳು ತಮ್ಮ ಮನ್ ಕಿ ಬಾತ್ ನಲ್ಲಿ ಜೆಇಇ ಮತ್ತು ನೀಟ್ ಪರೀಕ್ಷೆ ಕುರಿತಂತೆ ಮಾತನಾಡುತ್ತಾರೆಂದು ವಿದ್ಯಾರ್ಥಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆಟಿಕೆಗಳ ( ಖೇಲೋನಾ ಪೇ ಚರ್ಚ) ಬಗ್ಗೆ ಚರ್ಚೆ ಮಾಡಿರುವುದು ಹಾಸ್ಯಾಸ್ಪದ ಎಂದಿದ್ದಾರೆ.
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ… Read More
ಬೆಂಗಳೂರು : ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)… Read More
This website uses cookies.
View Comments
Olleya yojane
ಹೌದು,ಉದ್ಯೋಗ ಸೃಷ್ಟಿಗೆ ಬಹು ಮುಖ್ಯವಾದದ್ದು