ನನ್ನ ಮಾನವನಾಗಿ ಮಾಡಿದೆಡರೂ ತೊಡರೆ
ದುಃಖ ದುಮ್ಮಾನಗಳೆ ನಿಮಗೆ ಶರಣು..!
ಕಾಡೆದೆಯ ಕಲ್ಲೊಳಗೆ ಮನುಜತೆಯ ಶಿಲ್ಪವನು
ಕಟೆದರಳಿಸಿದ ಕಷ್ಟದುಳಿಯೆ ಶರಣು..!
ದಿನವೊಂದು ಹೆದರಿಕೆಯ ಮೆಟ್ಟಿಹಾಕಲು ಕಲಿಸಿ
ಬದುಕ ಪಾಠವನೊರೆದ ಹಸಿವೆ ಶರಣು..!
ಸಂಘರ್ಷಗಳ ಸತತ ಜೀವನದಿ ತಂದಿರಿಸಿ
ತುಕ್ಕಿಸದೆ ಸವೆಸಿರುವ ವಿಧಿಯೆ ಶರಣು..!
ಕೈದೀಪವಾದೆನಗೆ ಬೆಲೆ ತಂದ ಕಾರಿರುಳೆ
ತಾರೆಗಳ ತೋರಿರುವ ನಿನಗೆ ಶರಣು..!
ಪರಮಾತ್ಮಗೂ ಮೊದಲು ಪಕ್ಕದಾತ್ಮನ ಬಳಿಗೆ
ಸಾಗೆಂದು ಸೂಚಿಸಿದ ಒಳಿತೆ ಶರಣು..!
ಆತ್ಮಶೋಧನೆಯಲ್ಲಿ ಅಡಿಗಲ್ಲಿನೊಲು ಸಂದ
ಸಂಕಟದ ಸಮಯವೇ ನಿನಗೆ ಶರಣು..!
ಪೀಡಿಸುವರಿರದಿರಲು ಹಾರ ಮರೆವುದು ಹಕ್ಕಿ
ಮುಗಿಲೇರಿಸಿದ ಹಗೆಗೆ ನಿರುತ ಶರಣು..!
ಅವಮಾನ ಸಂದೇಹ ಸೋಲು ಖಿನ್ನತೆ ಕೊಳೆಯ
ಕೊಡವಿ ತೊಳೆದ ಶ್ರಮದ ಬೆವರೆ ಶರಣು..!
ವೇದನೆಯ ಹಾದಿಯಲಿ ಸಾಧನೆಯ ಕಲ್ ನೆಡುವ
ಕನಸಿತ್ತು; ಕಾಣದಿಹ ಕೈಯೆ ಶರಣು..!
ನನ್ನ ನಗೆಯನು ನಿನ್ನ ತುಟಿಗಿರಿಸಿ ನಿನ್ನಾಳ
ಕಂಬನಿಯ ನನಗಿಟ್ಟ ಜಗವೆ ಶರಣು..!
ಕುಗ್ಗುವಿಕೆಯೇ ಮರಣ; ಹಿಗ್ಗುವಿಕೆಯೇ ಜನನ
ಎಂದುಸಿರಿದರಿವ ಗುರು ಹರವೆ ಶರಣು..!
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
This website uses cookies.
Leave a Comment