ಸುಶಾಂತ್ ಕೊಲೆಗಾರರೊಂದಿಗೆ ಮಹಾರಾಷ್ಟ್ರ ಸಿಎಂ ಮಗನಿಗಿದೆ ಸ್ನೇಹ; ನಟಿ ಕಂಗನಾ ರಣಾವತ್ ಆರೋಪ

Team Newsnap
0 Min Read

ನ್ಯೂಸ್ನ್ಯಾಪ್.
ಮುಂಬೈ.

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಮಗ ಆದಿತ್ಯ ಠಾಕ್ರೆಗೆ ಸುಶಾಂತ್ ಕೊಲೆಗಾರರೊಂದಿಗೆ, ಡ್ರಗ್ ದಂಧೆಕೋರರೊಂದಿಗೆ ಸ್ನೇಹವಿದೆ ಎಂದು ನಟಿ‌ ಕಂಗನಾ ರಣಾವತ್ ಆರೋಪಿಸಿದ್ದಾರೆ.

ಮುಂಬೈನಲ್ಲಿರುವ ಪರಿಸ್ಥತಿಯ ಕುರಿತು ವಾಗ್ದಾಳಿ ನಡೆಸುತ್ತಲೇ ಇರುವ ನಟಿ ಕಂಗನಾ ಆದಿತ್ಯ ಠಾಕ್ರೆ ವಿರುದ್ಧ ಈ ಆರೋಪವನ್ನು ಮಾಡಿದ್ದಾರೆ‌.

ಶಿವಸೇನೆಯೊಂದಿಗಿನ ಜಟಾಪಟಿಯ ಬಗ್ಗೆ ಟ್ವೀಟಿಸಿರುವ ಅವರು ‘ನಾನು ಅಬಲೆ ಎಂದು‌ ಭಾವಿಸಬೇಡಿ. ಒಬ್ಬ ಮಹಿಳೆಯನ್ನು ಬೆದರಿಸುವ ಮೂಲಕ ಶಿವಸೇನೆಯವರು ತಮ್ಮ ಗೌರವವನ್ನು ಕಳೆದುಕೊಂಡಿದ್ದಾರೆ’ ಎಂದು‌ ಹೇಳಿದ್ದಾರೆ.

Share This Article
Leave a comment