ಪುಟ್ಟ ಕಂದಮ್ಮಗಳಿರುವ ಮನೆಗಳಲ್ಲಿ ಇಂದು ಕೃಷ್ಣಜನ್ಮಾಷ್ಟಮಿಯನ್ನು ಬಹಳ ಸಂಭ್ರದಿಂದ ಆಚರಿಸಲಾಗುತ್ತದೆ. ಅದೇ ರೀತಿ ಸ್ಯಾಂಡ್ವುಲ್ ನಟ ದಿ. ಚಿರಂಜೀವಿ ಸರ್ಜಾ ಪುತ್ರ ಜ್ಯೂನಿಯರ್ ಚಿರು ಕೃಷ್ಣನ ವೇಷದಲ್ಲಿ ಮಿಂಚಿದ್ದಾನೆ.
ಕೃಷ್ಣನ ಅಲಂಕಾರದಿಂದ ಕಂಗೊಳಿಸುತ್ತಿರುವ 10 ತಿಂಗಳ ತಮ್ಮ ಪುತ್ರ ಜ್ಯೂ.ಚಿರುವಿನ ಚಿತ್ರವನ್ನು ಮೇಘನಾ ರಾಜ್ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ನನ್ನ ಬೆಣ್ಣೆ, ಮುದ್ದು ಬಂಗಾರ ಎಂದು ಶೀರ್ಷಿಕೆ ನೀಡಿ ಎಲ್ಲರಿಗೂ ಕೃಷ್ಣಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ.
ಕೈಯಲ್ಲಿ ನವಿಲುಗರಿ ಹಿಡಿದ ಜ್ಯೂ.ಚಿರುನೊಂದಿಗೆ ನಟ ಪನ್ನಗಭರಣ ಮಗ ವೇದ ಭರಣ ಸೋಫಾದಲ್ಲಿ ಕುಳಿತು ಫೋಸ್ ನೀಡಿರುವುದು ಆಕರ್ಷಕವಾಗಿದೆ.