ಕೆರಳಿದ ಕೋಲಾರ ಜೆಡಿಎಸ್ ಕಾರ್ಯಕರ್ತರು- ಶಾಸಕನ ಕೈಲಾಸ ಸಮಾರಾಧನೆಗೆ ತೀರ್ಮಾನ

Team Newsnap
1 Min Read

ಕೋಲಾರ ಶಾಸಕ ಶ್ರೀನಿವಾಸಗೌಡ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​​​​ಗೆ ಮತಚಲಾಯಿಸಿದ ನಂತರ ಕೋಲಾರದಲ್ಲಿ ಶಾಸಕ ವಿರುದ್ದ ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಅಭಿಮಾನಿಗಳು ಜೂನ್ 21 ರಂದು ಕೈಲಾಸ ಸಮಾರಧನೆ ಕಾರ್ಯಕ್ರಮ ಹಮ್ಮಿಕೊಂಡು ಆಕ್ರೋಷ ವ್ಯಕ್ತ ಪಡಿಸಿದ್ದಾರೆ

ಜೆಡಿಎಸ್​ ಶಾಸಕ ಕೆ.ಶ್ರೀನಿವಾಸ ಗೌಡ ಮನೆ ಎದುರು ಜೆಡಿಎಸ್​ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಜೆಡಿಎಸ್​ ಪಕ್ಷಕ್ಕೆ ಮತ ನೀಡುವಂತೆ ಸಾಕಷ್ಟು ಮನವೊಲಿಸುವ ಕೆಲಸ ಮಾಡಲಾಯಿತಾದರೂ ಅಂತಿಮವಾಗಿ ಶ್ರೀನಿವಾಸ ಗೌಡರು ಕಾಂಗ್ರೆಸ್  ಪಕ್ಷದ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ಹಾಗೂ 2ನೇ ಪ್ರಾಶಸ್ತ್ಯದ ಮತವನ್ನು ಹಾಕಿದ್ದಾರೆ.

ಈ ನಿರ್ಧಾರ ಖಂಡಿಸಿದ ಕೋಲಾರ ಜೆಡಿಎಸ್​ ಕಾರ್ಯಕರ್ತರು ವಿಧಾನಪರಿಷತ್​ ಸದಸ್ಯ ಗೋವಿಂದರಾಜು ನೇತೃತ್ವದಲ್ಲಿ ಶ್ರೀನಿವಾಸಗೌಡರ ಮನೆ ಎದುರು ಪ್ರತಿಭಟನೆ ಮಾಡಿದ್ದಾರೆ. ಅಲ್ಲದೇ, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದಿಂದ ಕೆರಳಿದ ಕೋಲಾರ ಕ್ಷೇತ್ರದ ಮತದಾರರು, ಬದುಕಿರುವಾಗಲೇ ಶಾಸಕರ ತಿಥಿ ಮಾಡುವ ನಿರ್ಧಾರ ಮಾಡಿದ್ದಾರೆ.

ಇದನ್ನು ಓದಿ – ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಹಿಂಸಾಚಾರ; ಗಾಯಗೊಂಡಿದ್ದ ಇಬ್ಬರು ಇಂದು ಸಾವು

ಈ ಕುರಿತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕುಮಾರ ಸೇನಾ ಪಡೆ ಜೂನ್ 21ರಂದು ಕೈಲಾಸ ಸಮಾರಾಧನೆಗೆ ನಿರ್ಧಾರ ಮಾಡಿದೆ.

Share This Article
Leave a comment