ಧಾರವಾಡ ಉದ್ಯಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ಯು. ಬಿ. ಶೆಟ್ಟಿ ಮನೆ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದಾರೆ.
ಧಾರವಾಡದ ದಾನಸಕೊಪ್ಪದ ಮನೆ ಮೇಲೆ ಗೋವಾದಿಂದ ಬಂದ 5 ಜನರ ಐಟಿ ತಂಡ ದಾಳಿ ನಡೆಸಿ ತಪಾಸಣೆಯಲ್ಲಿ ತೊಡಗಿದ್ದಾರೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರ ತಾಲೂಕಿನ ಉಪ್ಪುಂದ ಮೂಲದ ಯು. ಬಿ. ಶೆಟ್ಟಿ ಪ್ರಥಮ ದಜೆ೯ ಗುತ್ತಿಗೆದಾರರು ಹಾಗೂ ಉದ್ಯಮಿಯಾಗಿದ್ದಾರೆ. ಜೊತೆಗೆ ಡಿ.ಕೆ.ಶಿವಕುಮಾರ್ ಆಪ್ತರು ಹೌದು.
ಇತ್ತೀಚಿನ ದಿನಗಳಲ್ಲಿ ಶಾಲೆ, ಕಾಲೇಜು ಉದ್ಯಮದಲ್ಲಿ ತೊಡಗಿದ್ದ ಶೆಟ್ಟಿ ಹಲವು ವರ್ಷಗಳಿಂದ ಡಿಕೆಎಸ್ ಆಪ್ತ ಎಂತಲೇ ಗುರುತಿಸಿಕೊಂಡಿದ್ದಾರೆ. ಯು.ಬಿ.ಶೆಟ್ಟಿ ಮನೆಗೆ ಐಟಿ ಅಧಿಕಾರಿಗಳಿ ದಾಳಿ ಇಡುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ ಮನೆಗೆ ಭೇಟಿ ನೀಡಿದ್ದಾರೆ.