January 29, 2026

Newsnap Kannada

The World at your finger tips!

ips

ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಭಾಸ್ಕರ್ ರಾವ್ ರೆಡಿ ?

Spread the love

ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ದರಾಗಿರುವ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಅರ್ಜಿ ಅಂಗೀಕಾರ ಆದ ಬೆನ್ನಲ್ಲೇ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರಂತೆ.

ಭಾಸ್ಕರ್‌ರಾವ್ ರಾಜಕೀಯ ನಡೆಯು ಕಾಂಗ್ರೆಸ್ ನಿಂದಲೇ ಆರಂಭವಾಗುವ ಲಕ್ಷಣಗಳು ಸ್ಪಷ್ಟವಾಗಿವೆ.

ಇತ್ತೀಚೆಗಷ್ಟೇ ನಿಧನರಾದ ಅಸ್ಕರ್ ಫರ್ನಾಂಡಿಸ್‌ ಅವರಿಂದ ತೆರವಾಗಿರುವ ಸ್ಥಾನದ ಮೇಲೆ ಭಾಸ್ಕರ್ ರಾವ್ ಕಣ್ಣಿಟ್ಟಿದ್ದಾರಂತೆ. ರಾಜ್ಯದಿಂದ ರಾಜ್ಯಸಭೆಗೆ ಕಾಂಗ್ರೆಸ್ ಸದಸ್ಯ ಆಸ್ಕರ್ ಫರ್ನಾಂಡಿಸ್ ಆಯ್ಕೆಯಾಗಿದ್ದರು.

ಸದ್ಯದಲ್ಲೇ ಒಂದು ರಾಜ್ಯಸಭಾ ಸ್ಥಾನದ ಉಪ-ಚುನಾವಣೆ ಎದುರಾಗಲಿದೆ. ಆ ಉಪ-ಚುನಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಭಾಸ್ಕರ್ ರಾವ್ ನಿರ್ಧರಿಸಿದ್ದಾರಂತೆ.

ಈ ಕುರಿತಂತೆ ಕಾಂಗ್ರೆಸ್ ನಲ್ಲಿ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ. ಭಾಸ್ಕರ್ ರಾವ್ ಅಂತೂ ಅನಿರೀಕ್ಷಿತ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ.

error: Content is protected !!