February 20, 2026

Newsnap Kannada

The World at your finger tips!

police

ಮಂಡ್ಯದಲ್ಲಿ ಹೆಚ್ಚಿದ ಕೌರ್ಯ: ಮಗನಿಂದ ತಂದೆ, ಅಳಿಯನಿಂದ ಮಾವನ ಕೊಲೆ!

Spread the love

ಕ್ರೈಂ ಲೋಕದಲ್ಲಿ ಹೆಚ್ಚಾಗಿ ಗುರುತಿಸಿ ಕೊಂಡಿರುವ ಮಂಡ್ಯ ಜಿಲ್ಲೆಯಲ್ಲಿ ಒಂದೇ ದಿನ ಎರಡು ಕೊಲೆಗಳು ನಡೆದಿವೆ.

ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ರಾತ್ರಿ ಮಗ ಅಪ್ಪನನ್ನು ಚೂರಿಯಿಂದ ಇರಿದು ಕೊಂದಿದ್ದಾನೆ.

ಅಪ್ಪ ತನ್ನ ತಾಯಿಯ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಅಪ್ಪ ದೇವರಾಜು(40) ನನ್ನು ಮಗನಾದ ಅಪ್ಪು ಚಾಕುವಿನಿಂದ ಇರಿದು ಕೊಲೆಗೈದು ಪರಾಯಾಗಿದ್ದಾನೆ.

ಮತ್ತೊಂದು ಪ್ರಕರಣದಲ್ಲಿ
ಚಿನಕುರುಳಿ ಗ್ರಾಮದಲ್ಲಿ ಅಳಿಯ ಮಾವನನ್ನು ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆಗೈ ದಿದ್ದಾನೆ.

ಘಟನೆಯಲ್ಲಿ ಮಾವ ಸುರೇಶ್(50)ಅಳಿಯ ರಘುವಿನಿಂದ ಬರ್ಬರವಾಗಿ ಕೊಲೆಯಾಗಿದ್ದಾನೆ. ಕೊಲೆಗೆ ಕೌಟುಂಬಿಕ ಕಲಹ ಕಾರಣ ಎಂದು ಹೇಳಲಾಗಿದೆ. ಮಾವನನ್ನು ಕೊಲೆಗೈದು ಅಳಿಯ ಸ್ಥಳದಿಂದ ನಾಪತ್ತೆ ಯಾಗಿ ದ್ದಾನೆ‌.

error: Content is protected !!