ಯುಪಿ ಚುನಾವಣೆ ಮೇಲೆ ಪರಿಣಾಮ : ಹಿಜಾಬ್ ವಿಚಾರಣೆ ಮುಂದೂಡುವಂತೆ ಮತ್ತೊಂದು ಅರ್ಜಿ

Team Newsnap
1 Min Read
shock for Congress: High Court order to cancel ACB - Lokyukta gets power again

ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಸಮವಸ್ತ್ರ ಸಂಹಿತೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ.

ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೆ ವಿಚಾರಣೆಯನ್ನು ಮುಂದೂಡುವಂತೆ ಹಿಜಾಬ್ ಪ್ರಕರಣದ ಆರು ವಿದ್ಯಾರ್ಥಿನಿಯರು ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಈಗ ಹಿಜಾಬ್​​​ ಕೇಸ್​ ಹೈಕೋರ್ಟ್​ ಅಂಗಳದಲ್ಲಿದೆ. ನಿನ್ನೆ ಸುಧೀರ್ಘ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆಯನ್ನು ಇಂದಿಗೆ ಮುಂದೂಡಿದೆ.

ಈ ವಿಚಾರಣೆಯನ್ನು ಪಂಚರಾಜ್ಯ ಚುನಾವಣೆ ಮುಗಿಯೋವರೆಗೂ ಅಂದರೆ ಫೆಬ್ರವರಿ 28ರ ವರೆಗೆ ಮುಂದೂಡುವಂತೆ, ಆರು ವಿದ್ಯಾರ್ಥಿನಿಯರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಪ್ರಕರಣ ರಾಜಕೀಯ ಸ್ವರೂಪ ಪಡೆದಿದ್ದು, ಅರ್ಜಿಯ ವಿಚಾರಣೆ ಅಲ್ಲಿನ ಚುನಾವಣೆ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ವಿಚಾರಣೆಯನ್ನು ಮುಂದೆ ಹಾಕಬೇಕು ಎಂದು ವಿದ್ಯಾರ್ಥಿನಿಯರು, ಹಿರಿಯ ವಕೀಲ ಮೊಹಮ್ಮದ್ ತಾಹಿರ್ ಮೂಲಕ ಚರ್ಚೆ ನಡೆಸಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಅರ್ಜಿ ವಿಚಾರಣೆ ತೀವ್ರ ಕುತೂಹಲ ಮೂಡಿಸಿದೆ.

Share This Article
Leave a comment