ಹಾಸನ ಮಾದರಿಯಲ್ಲಿ ಮಂಡ್ಯದಲ್ಲೂ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವೆ. ಅಥವಾ ಸುಮಲತಾ ಕಣಕ್ಕೆ ಇಳಿದರೆ ಸಾಮಾನ್ಯ ರೈತ ಮಹಿಳೆ ನಿಲ್ಲಿಸಿ ಗೆಲ್ಲಿಸುವೆ ಎಂದು ಹೇಳುವುದರ ಮೂಲಕ ಮಂಡ್ಯದಿಂದ ತಮ್ಮ ಸ್ಪರ್ಧೆಯನ್ನು ಸಾರಾಸಗಟಾಗಿ ಮಾಜಿ ಸಿಎಂ ಕುಮಾರಸ್ವಾಮಿ ತಳ್ಳಿ ಹಾಕಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಈ ಬಾರಿ ಸುಮಲತಾ ಬೇಕಾದರೆ ಮಂಡ್ಯದಿಂದ ಸ್ಪರ್ಧೆ ಮಾಡಲಿ. ನಾನು ಸ್ಪರ್ಧೆ ಮಾಡುವೆ ಎಂದು ಹೇಳಿಲ್ಲ. ಒಂದು ವೇಳೆ ಸುಮಲತಾ ಸ್ಪರ್ಧಿಸಿದರೆ ನಾನು ಸಾಮಾನ್ಯ ರೈತ ಮಹಿಳೆ ಅಥವಾ ಹಾಸನ ಮಾದರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಗೆಲ್ಲಿಸುವೆ ಎಂದರು.
ಸುಮಲತಾ ಅವರಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ. ಅವರಷ್ಟು ಸಾಧನೆ ಮಾಡದೇ ಇರುವುದರಿಂದ ಅವರ ಸವಾಲನ್ನು ನಿರಾಕರಣೆ ಮಾಡುವೆ ಎಂದರು.
ಮಂಡ್ಯ ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟನೆಗೆ ಅವಸರ ಏಕೆ ? ನಾಳೆ ಮಾಡೋಣ ಎಂದು ಹೇಳಿದರು.ಇದನ್ನು ಓದಿ –ಧಾರವಾಡಕ್ಕೆ ಪ್ರವೇಶ : ವಿನಯ್ ಕುಲ್ಕರ್ಣಿಗೆ ನಿರ್ಬಂಧ ಮುಂದುವರಿಕೆ – ಶಿಗ್ಗಾಂವ್ ನಿಂದ ಸ್ಪರ್ಧೆ ?
- ಬೆಂಗಳೂರಿನಲ್ಲಿ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ
- ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ : ಸಿಎಂ ಸಿದ್ದು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಪೆನ್ ಡ್ರೈವ್ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ ರಾಜ್ಯದ ಅಭಿವೃದ್ಧಿ
- ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ