ನಾನು ಬಿಜೆಪಿ ವಿರುದ್ಧ ಎಂದೂ ಹೋಗುವುದಿಲ್ಲ ಬಿಜೆಪಿಯಲ್ಲೇ ಇರುತ್ತೇನೆ, ಕ್ಷೇತ್ರದ ಶೇ. 90 ಕಾರ್ಯಕರ್ತರು ನನ್ನ ಜೊತೆ ಇದ್ದಾರೆ, ನನಗೆ ಸಹಕಾರ ನೀಡುತ್ತಿದ್ದಾರೆ.
ನಾನು ಶಾಸಕನಾಗುವುದು ಮುಖ್ಯ ಅಲ್ಲ. ಮೋದಿ ಅವರ ಪ್ರೀತಿ ನನಗೆ ಮುಖ್ಯ ಎಂದು ಶಾಸಕ ಎಸ್.ಎ. ರಾಮದಾಸ್ ಮಂಗಳವಾರ ಹೇಳಿದರು.
2023ರ ವಿಧಾನಸಭಾ ಚುನಾವಣೆಗೆ ಕೆ.ಆರ್ ಕ್ಷೇತ್ರದಿಂದಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ತಮ್ಮ ನಿವಾಸದ ಎದುರು ಬೆಂಬಲಿಗರೊಂದಿಗೆ ನಿರ್ಣಾಯಕ ಸಭೆ ನಡೆಸಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ನಾನು ಚುನಾವಣೆಗೆ ಸ್ಪರ್ಧೆ ಮಾಡಿದರೆ 10 ರಿಂದ 12 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ.
ಆದರೆ ನನಗೆ ಮಹಾನ್ ನಾಯಕನ ಜವಾಬ್ದಾರಿಯಿದೆ. ನಾನು ಪಕ್ಷದ ವಿರುದ್ಧ ಹೋಗೋಲ್ಲ, ಬಿಜೆಪಿಯಲ್ಲೇ ಇರುತ್ತೇನೆ ಎಂದರು.
ನಾನು ಪಕ್ಷದ ಅಭ್ಯರ್ಥಿಯನ್ನು ಶ್ರಮವಹಿಸಿ ಗೆಲ್ಲಿಸುವೆ. ನಾನೇ ಪ್ರಚಾರಕ್ಕೂ ತೆರಳುತ್ತೇನೆ. ನಾಮಪತ್ರ ಸಲ್ಲಿಸುವ ಮುನ್ನ ಸಾಥ್ ಕೊಡುತ್ತೇನೆ ಎಂದರು.ಇದನ್ನು ಓದಿ –ಸಿದ್ದು ಮೊಮ್ಮಗ ಧವನ್ ರಾಜಕೀಯಕ್ಕೆ ಅರಂಗ್ರೇಟಂ- ಪ್ರಚಾರ ವೈಖರಿ ತಿಳಿಯುವ ಆಸಕ್ತಿ