ಮಂಡ್ಯ ಜಿಲ್ಲೆಯಲ್ಲಿ ಗೃಹಿಣಿ ಆತ್ಮಹತ್ಯೆಗೆ ಶರಣು; ಮೃತಳ ಪತಿ‌ ಕಾರು ಜಖಂ

Team Newsnap
1 Min Read

ವರದಕ್ಷಿಣೆ ಕಿರುಕುಳದಿಂದ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನಲ್ಲಿ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾರೆ

ಮಂಡ್ಯದ ಜಿಲ್ಲೆ ಕೆ.ಅರ್.ಪೇಟೆ ತಾಲ್ಲೂಕು ಕಾರಿಗನಹಳ್ಳಿ ಗ್ರಾಮದಲ್ಲಿ ಈ ಘಟನೆ ಗೃಹಿಣಿ ಆತ್ಮಹತ್ಯೆಗೆ ಶರಣು. ಮಧು ಎಂಬುವರ ಪತ್ನಿ ಸಹನ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸಹನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. NETFLIX 300 ಸಿಬ್ಬಂದಿಗಳನ್ನ ಕೆಲಸದಿಂದ ವಜಾ ಮಾಡಿದ

ಪತ್ನಿ ಆತ್ಮಹತ್ಯೆ ಬಳಿಕ ಪತಿ ಮಧು ಹಾಗೂ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಮೃತ ಗೃಹಿಣಿ ಸಹನ ಪೋಷಕರಿಂದ ವರದಕ್ಷಿಣೆ ಕಿರುಕುಳ ದೂರು‌ ದಾಖಲಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಮೃತಳ ಸಂಬಂಧಿಕರು ಮನೆಯ ಮುಂದೆ ಇದ್ದ ಆರೋಪಿ ಮಧು ಕಾರು ಜಖಂಗೊಳಿಸಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment