ಮಂಡ್ಯದ ದುದ್ದ ಬಳಿ ಭೀಕರ ಬಸ್ ಅಪಘಾತ : 50 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು

Team Newsnap
1 Min Read
Horrible bus accident near Mandya: 50 students out of danger ಮಂಡ್ಯದ ದುದ್ದ ಬಳಿ ಭೀಕರ ಬಸ್ ಅಪಘಾತ : 50 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು #Thenewsnap #Latest_News #Accident #Mandya_news #Bus_accident #Mandya_District #Students #Bengaluru #mysuru

50ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಕೆಎಸ್​ಆರ್​​ಟಿಸಿ ಬಸ್​ವೊಂದು ಜಮೀನಿಗೆ ನುಗ್ಗಿದ ಘಟನೆ ಮಂಡ್ಯ ಬಳಿ ದುದ್ದ ಗ್ರಾಮದ ಬಳಿ ನಡೆದಿದೆ.

ಏಕಾಏಕಿ ಅಡ್ಡಬಂದ ಟ್ರ್ಯಾಕ್ಟರ್​ ಅನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿ KSRTC ಬಸ್ ಅಪಘಾತಕ್ಕಿಡಾಗಿದೆ.
KSRTC ಬಸ್​ ಮೇಲುಕೋಟೆಯಿಂದ ಮಂಡ್ಯಗೆ ಹೋಗುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.ಇದನ್ನು ಓದಿ -ಭಾರಿ ಮಳೆ: ಕೆಆರ್ ಎಸ್ ಡ್ಯಾಂನಿಂದ 10 ಸಾವಿರ ಕ್ಯೂಸೆಕ್ ನೀರುನದಿಗೆ

ಕೂದಲೆಳೆ ಅಂತರದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದಲೇ ಭಾರೀ ದುರಂತ ತಪ್ಪಿದೆ.

ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸದ್ಯ ಸ್ಥಳಕ್ಕೆ ಶಿವಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

Share This Article
Leave a comment