ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಕಾಟ: ಇಂದೂ ಸೇರಿ ನಾಲ್ಕು ಬಾರಿ ಕೈ ಕೊಟ್ಟ ಹೆಲಿಕ್ಯಾಪ್ಟರ್

Team Newsnap
1 Min Read

ಸಿದ್ದರಾಮಯ್ಯರಿಗೆ ಪದೇ ಪದೆ ಹೆಲಿಕಾಪ್ಟರ್ ಕಾಟ ಕೊಡುತ್ತಿದೆ. ಇಂದೂ ಸೇರಿ ನಾಲ್ಕು ಬಾರಿ ಇದುವರೆಗೂ ಕೈ ಕೊಟ್ಟಿದೆ

ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಭಾನುವಾರ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಅನ್ನು ತುರ್ತು ಭೂಸ್ಪರ್ಷ ಮಾಡಲಾಗಿದೆ.

ನಿಗದಿಯಂತೆ ಚಿತ್ರದುರ್ಗದಿಂದ ತುಮಕೂರಿಗೆ ಹೆಲಿಕಾಪ್ಟರ್​​ನಲ್ಲಿ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದ್ದರು.

ಆದರೆ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಹಾರಿದ ಕೆಲ ಹೊತ್ತಿನಲ್ಲೇ ಮತ್ತೆ ಹೆಲಿಕಾಪ್ಟರ್​​​​ ಚಿತ್ರದುರ್ಗದ ಹೆಲಿಪ್ಯಾಡ್​ಗೆ ಮರಳಿ ಬಂದಿಳಿಯಿದಿದೆ.

ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​​ ಈ ಹಿಂದೆ ನಾಲ್ಕು ಬಾರಿ ಆತಂಕದ ಸ್ಥಿತಿಯನ್ನ ಎದುರಿಸಿದೆ. ಒಂದು ಬಾರಿ ಹೆಲಿಕಾಪ್ಟರ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಮೂಡಿಸಿದರೆ ಇನ್ನೊಂದು ಬಾರಿ ಅವರು ಹೆಲಿಕಾಪ್ಟರ್​​ಗೆ ಹದ್ದು ಡಿಕ್ಕಿ ಹೊಡೆದಿರುತ್ತೆ. ಮೂರನೇ ಬಾರಿ ಲ್ಯಾಂಡಿಂಗ್ ಗೇರ್ ಅಲ್ಲಿ ಸಮಸ್ಯೆಯಾದ ಕಾರಣ ಸುಮಾರು 30 ನಿಮಿಷಗಳಕಾಲ ಅವರ ಹೆಲಿಕಾಪ್ಟರ್ ಆಗಸದಲ್ಲೇ ಹಾರುತ್ತಾ ಆತಂಕ ತಂದಿಟ್ಟಿತು.

Share This Article
Leave a comment