ಹಾಸನದ ಯೋಧ ಕರ್ತವ್ಯದಲ್ಲಿದ್ದಾಗಲೇ ನಿಧನ

Team Newsnap
0 Min Read

ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಹಾಸನ ತಾಲೂಕಿನ ದುದ್ದ ಹೋಬಳಿ ಅನುಗವಳ್ಳಿ ಗ್ರಾಮದ ಯೋಧ ಗುರುಮೂರ್ತಿ ನಿಧನರಾಗಿದ್ದಾರೆ.

ಗುರುಮೂರ್ತ(36) ಅಸ್ಸಾಂನಲ್ಲಿ ಕರ್ತವ್ಯದಲ್ಲಿದ್ದಾಗಲೇ ಅನಾರೋಗ್ಯ ಕಾಣಿಸಿಕೊಂಡಿತ್ತು, ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ

ಕಳೆದ 19 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಗುರುಮೂರ್ತಿ ನಿವೃತ್ತಿಗೆ ಕೆಲವೇ ದಿನಗಳು ಬಾಕಿ ಇತ್ತು.

ಮೃತ ಯೋಧ ತಂದೆ-ತಾಯಿ, ಪತ್ನಿ ತಾರಾ, ಎರಡು ಮಕ್ಕಳನ್ನು ಅಗಲಿದ್ದಾರೆ. ಯೋಧ ಗುರುಮೂರ್ತಿಯ ಪಾರ್ಥಿವ ಶರೀರ ನಾಳೆ ಹುಟ್ಟೂರಿಗೆ ಆಗಮಿಸುವ ನಿರೀಕ್ಷೆ ಇದೆ.

Share This Article
Leave a comment