ಬಳ್ಳಾರಿಯಲ್ಲಿ ‘ಡಿಸಿ’ ಗನ್ ಮ್ಯಾನ್ ಕಿರುಕುಳ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ

Team Newsnap
0 Min Read

ಬಳ್ಳಾರಿ ಡಿಸಿ ಗನ್ ಮ್ಯಾನ್ ಕಿರುಕುಳ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಳ್ಳಾರಿ ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಜರುಗಿದೆ

ಡಿಸಿ ಗನ್ ಮ್ಯಾನ್ ಬಸವರಾಜ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೆಟ್ರೋಲ್ ಸುರಿದುಕೊಂಡು ಒಂದೇ ಕುಟುಂಬದ ನಾಲ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ರಾಜೇಶ್, ಶೇಖಪ್ಪ, ಜ್ಯೋತಿ, ಸುಶೀಲಮ್ಮ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಜ್ಯೋತಿ
ಸ್ಥಿತಿ ಗಂಭೀರವಾಗಿದೆ

ಗಾಯಾಳುವಿಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಘಟನೆ ಕಾರಣ ಗೊತ್ತಾಗಿಲ್ಲ.

Share This Article
Leave a comment