59 ತಿಂಗಳ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರು ಹಣ ಚಾಮುಂಡೇಶ್ವರಿಗೆ ಅರ್ಪಿಸಿದ ಸಚಿವೆ ಲಕ್ಷ್ಮಿ

Team Newsnap
1 Min Read

ಮೈಸೂರು : ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2 ಸಾವಿರ ರೂ. ಕೊಡುಗೆಯ ಹಣವನ್ನು ಪ್ರತಿ ತಿಂಗಳು ಮೊದಲು ನಾಡದೇವಿ ತಾಯಿ ಚಾಮುಂಡೇಶ್ವರಿಗೆ ಅರ್ಪಿಸಿ ನಂತರ ಫಲಾನುಭವಿಗಳಿಗೆ ನೀಡುವಂತೆ ನಿರ್ಧರಿಸಿದ್ದಾರೆ .

ಗೃಹಲಕ್ಷ್ಮಿ ಯೋಜನೇಯ ಪರವಾಗಿ ರಾಜ್ಯದ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಹಿನ್ನೆಲೆಯಲ್ಲಿ ತಾಯಿ ಚಾಮುಂಡೇಶ್ವರಿಗೆ ಪ್ರತಿ ತಿಂಗಳ 2 ಸಾವಿರ ರೂ.ನಂತೆ ಒಟ್ಟು 59 ತಿಂಗಳಿಗೆ 1,18,000 ರೂ. ಹಣವನ್ನು ಅರ್ಪಿಸಲಾಗಿದೆ .

ಇದನ್ನು ಓದಿ – ಜನತಾ ದರ್ಶನ ಅಲ್ಲ – ಇದು ಜನ ಸ್ಪಂದನ : ಯಶಸ್ವಿ ಕಾರ್ಯಕ್ರಮ – ಸಿಎಂ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಒಟ್ಟು 1,18,000 ರೂಪಾಯಿಯನ್ನು ತಮ್ಮ ವೈಯಕ್ತಿಕ ಹಣದಿಂದ ದೇಗುಲಕ್ಕೆ ಅರ್ಪಿಸಿದ್ದಾರೆ.

Share This Article
Leave a comment