ಪ್ರೀತಿಸಿ, ಎಲ್ಲರ ವಿರೋಧ ಕಟ್ಟಿಕೊಂಡು ಮದುವೆನೂ ಆದ. ಆದ್ರೆ ಓಡಿ ಹೋಗಿದ್ದು ಮಾತ್ರ ಒಬ್ಬನೇ.
1 ವರ್ಷ ಪ್ರೀತಿಸಿದ್ರು. 2 ತಿಂಗಳ ಹಿಂದೆ ಮದುವೆಯೂ ಆದ್ರು. ನಿಖಿಲ್, ಚೈತ್ರ ಸಪ್ತಪದಿ ತುಳಿದ ಜೋಡಿ . ಇನ್ನೇನು ಇಷ್ಟ ಪಟ್ಟವರನ್ನೇ ಮದುವೆಯಾಗಿದ್ದಾಯು ಎಂದು ಸುಖವಾಗಿ ಸಂಸಾರ ನಡೆಯಬೇಕಿದ್ದ ಇವರ ಬಾಳಲ್ಲಿ ಈಗ ಆಗಿದ್ದೇ ಬೇರೆ.
ಚೈತ್ರ ಮೊಬೈಲ್ ಶಾಪ್ವೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡ್ತಿದ್ದಳು. ಅದೇ ಶಾಪ್ನಲ್ಲಿ ಫೈನಾನ್ಸ್ ವಿಭಾಗದಲ್ಲಿದ್ದ ನಿಖಿಲ್ ಕೆಲಸ ಮಾಡ್ತಿದ್ದ. ಇಬ್ಬರು ಪರಸ್ಪರ ಪ್ರೀತಿಸಿದ್ದಾರೆ. 1 ವರ್ಷದಿಂದ ಅಲ್ಲಿ ಇಲ್ಲಿ ಅಂತಾ ಸುತ್ತಾಡಿದ್ದಾರೆ ಕೂಡಾ. ಆದ್ರೆ ಇಬ್ಬರೂ ಅನ್ಯಜಾತಿಯವರಾಗಿದ್ದರಿಂದ ವಿವಾಹಕ್ಕೆ ಮನೆಯವರ ವಿರೋಧ ವ್ಯಕ್ತವಾಗಿತ್ತು.
ಫೆಬ್ರವರಿ 4 ರಂದು ದೇವಾಲಯದಲ್ಲಿ ಮದುವೆಯಾಗಿದ್ದ ಇಬ್ಬರು ಬಳಿಕ ಫೆಬ್ರವರಿ 7ಕ್ಕೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆೆ. ಮದುವೆ ಬಳಿಕ ತಿಟಪೂರಿನ ಹಿಂಡಸ್ಕೆರೆಯ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.
ಫೆಬ್ರವರಿ 10ಕ್ಕೆ ನನ್ನ ತಾಯಿಗೆ ಹುಷಾರಿಲ್ಲ ಅಂತಾ ನಿಖಿಲ್ ವಾಪಸ್ ಹೋಗಿದ್ದಾನೆ. ಅಂದು ಹೋದ ನಿಖಿಲ್ ಇದುವರೆಗೂ ಪತ್ತೇನೆ ಇಲ್ಲ. ನಿಖಿಲ್ ತಾಯಿಗೆ ಕೇಳಿದ್ರೆ ಮಗ ಬಂದಿಲ್ಲ ಎಂದರು
ಕಾಣೆಯಾದ ಗಂಡನನ್ನು ಹುಡುಕಿಕೊಂಡುವಂತೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಚೈತ್ರಾ ದೂರು ನೀಡಿದ್ದಾಳೆ.
- ಮೂವರು ಯುವಕರು ರೈಲಿಗೆ ಸಿಲುಕಿ ದುರ್ಮರಣ
- ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಕೇಂದ್ರ ಸಚಿವ ಗಡ್ಕರಿ
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
- 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ