ಕೊರೋನಾ ಸಂಬಂಧ ಎಲ್ಲ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಆನ್ಲೈನ್ ಮುಖಾಂತರ ಪಾಠಗಳನ್ನು ನಡೆಸಲಾಗಿತ್ತು. ಈಗ ಸರ್ಕಾರವು ಶಾಲೆಗಳ ಪುನರಾರಂಭಕ್ಕೆ ಆಸಕ್ತಿ ತೋರಿಸುತ್ತಿದೆ. ಅದಕ್ಕೆ ಸಿದ್ಧತೆ ನಡೆಸುತ್ತಿದೆ.
ಈ ಬಗ್ಗೆ ಎಲ್ಲ ತಾಲೂಕುಗಳ ಶಾಸಕರಿಗೆ ಮತ್ತು ಸಚಿವರಿಗೆ ಪತ್ರ ಬರೆದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶಾಲೆಗಳ ಆರಂಭಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ತಿಳಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ.
ಸಚಿವರು ಮತ್ತು ಶಾಸಕರು ಶಾಲೆಗಳ ಪುನರಾರಂಭದ ಬಗೆಗಿನ ಸಲಹೆ ಮತ್ತು ಸೂಚನೆಗಳನ್ನು ಮಿಂಚಂಚೆ ಮೂಲಕ ತಿಳಿಸಲು ಕೋರಿದ್ದಾರೆ. ‘ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳ ಪುನರಾರಂಭದ ಬಗ್ಗೆ ಚಿಂತನೆ ನಡೆಸಿದೆ. ಎಲ್ಲರ ಸಲಹೆ ಹಾಗೂ ಮಾರ್ಗದರ್ಶನದ ಆಧಾರದ ಮೇಲೆ ಶಾಲೆಗಳ ಆರಂಭ ಮಾಡಲಾಗುವುದು’ ಎಂದು ಸಚಿವರು ತಿಳಿಸಿದರು.