ಹನಿಟ್ರ್ಯಾಪ್ ಯುವತಿ ಸೇರಿದಂತೆ ಏಳು ಮಂದಿ ಗ್ಯಾಂಗ್ ಈ ಕೃತ್ಯದಲ್ಲಿ ಭಾಗಿಯಾಗಿದೆ. ಐವರು ನಾಪತ್ತೆಯಾಗಿದ್ದಾರೆ.
ಮಂಡ್ಯದ ಕೆರೆ ಅಂಗಳದ ನಿವಾಸಿ ಸಲ್ಮಾ ಭಾನು ಎಂಬಾಕೆಯೇ ಈ ಹನಿಟ್ರ್ಯಾಪ್ ಪ್ರಕರಣದ ರುವಾರಿ. ಮಾಂಸ ತಿಂದು ದೇವಸ್ಥಾನಕ್ಕೆ ಬಂದ ಸಿದ್ದರಾಮಯ್ಯ – ಬಿಜೆಪಿ ಅಪಪ್ರಚಾರ : ಸಿದ್ದು
ಕಳೆದ ಕೆಲವು ದಿನಗಳಿಂದ ಯುವತಿಯೊಬ್ಬಳ ಮೂಲಕ ರಿಯಲ್ ಎಸ್ಟೇಟ್ ಉದ್ದಮಿಯೂ ಆಗಿರುವ ಜಗನ್ನಾಥ್ ಶೆಟ್ರುಗೆ ಮೊಬೈಲ್ ಕರೆ ಮಾಡಿಸಿ ಸ್ನೇಹ ಸಂಪಾದಿಸುವಂತೆ ಮಾಡಿದ್ದಾರೆ.
ನಂತರ ಮೈಸೂರಿನ ಲಾಡ್ಜ್ ಗೆ ಆ ಯುವತಿ ಹೇಳಿದ್ದಾಳೆ. ಅಲ್ಲಿಗೆ ಹೋದ ಶೆಟ್ರು ಯುವತಿ ಸಲುಗೆಯಿಂದ ಇರುವ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬಂದ ನಂತರ ಯುವತಿ, ಸಲ್ಮಾ ಬಾನು ಸೇರಿ 7 ಮಂದಿ ಗ್ಯಾಂಗ್ ಶೆಟ್ರ ಬಳಿ 50 ಲಕ್ಷ ರುಗಳನ್ನು ಬ್ಲ್ಯಾಕ್ ಮೇಲ್ ಮಾಡಿ ಕಿತ್ತುಕೊಂಡು ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ಗ್ಯಾಂಗ್ ಬೇಡಿಕೆ ಹೆಚ್ಚಾದಂತೆ ಜಗನ್ನಾಥ್ ಶೆಟ್ಟರು ಕೊನೆಗೆ ರೋಸಿ ಹೋಗಿ ಪೋಲಿಸರಿಗೆ ದೂರು ನೀಡಿದರು.
ನಂತರ ಹನಿಟ್ರ್ಯಾಪ್ ಪ್ರಕರಣದ ರುವಾರಿ ಸಲ್ಮಾಬಾನು ಬಂಧಿಸಿ ನಂತರ ತಲೆ ಮರೆಸಿಕೊಂಡಿರುವ ಯುವತಿ ಹಾಗೂ ಇತರ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಬಂಧನಕ್ಕೆ ಒಳಗಾದ ಸಲ್ಮಾ ಬಾನುಳನ್ನು 10 ದಿನಗಳ ಕಾಲ ವಿಚಾರಣೆಗೆ ಪೋಲಿಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಮಂಡ್ಯದ ಪಶ್ಚಿಮ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು