January 28, 2026

Newsnap Kannada

The World at your finger tips!

spb ceromany

source- google credits- the hindu

ಗಾನ ಕೋಗಿಲೆ ಎಸ್‌‌ಪಿಬಿ ಮಣ್ಣಿನಲ್ಲಿ ಲೀನ

Spread the love

ನಿನ್ನೆ ಚೆನ್ನೈನ ಎಂಜಿಎಂ‌ ಆಸ್ಪತ್ರೆಯಲ್ಲಿ ವಿಧಿವಶರಾದ ಗಾನ ಗಾರುಡಿಗ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅಂತ್ಯ ಕ್ರಿಯೆ
ಚೆನ್ನೈನಲ್ಲಿರುವ ಫಾರ್ಮ್‌ ಹೌಸ್‌‌ನಲ್ಲಿ ಪುತ್ರ ಚರಣ್ ನೆರವೇರಿಸಿದರು.

ಸಹಸ್ರಾರು ಅಭಿಮಾನಿಗಳ ಅಶ್ರುತರ್ಪಣ ನಡುವೆ ಬಾಲು ಮಣ್ಣಿನಲ್ಲಿ ಲೀನವಾದರು.

ಕೊರೋನಾ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಎಸ್‌ಪಿಬಿ ಆಗಸ್ಟ್ 5 ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಗುಣಮುಖರಾಗದೇ ನಿನ್ನೆ ಮಧ್ಯಾಹ್ನ ವಿಧಿವಶರಾದರು.

ಎಸ‌್ ಪಿಬಿಯರವರ ನಿಧನದ ಸುದ್ದಿ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ಪ್ರಧಾನಿ ಮೋದಿ ಸೇರಿದಂತೆ, ಅನೇಕ ರಾಜಕೀಯ ಗಣ್ಯರು ಶಾಂತಿ ಕೋರಿದ್ದಾರೆ‌. ಭಾರತೀಯ‌ ಚಿತ್ರರಂಗದ ಹಿರಿಯರಾದ ಅಮಿತಾಭ್, ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ನಂದಮೂರಿ ಬಾಲಕೃಷ್ಣ, ಸಂಗೀತ ಕ್ಷೇತ್ರದ ದಿಗ್ಗಜರಾದ ಹಂಸಲೇಖ, ಇಳಯರಾಜ, ಎಆರ್ ರೆಹಮಾನ್, ಮಣಿಶರ್ಮ, ಎಂ ಎಂ ಕೀರವಾಣಿ, ಆಶಾ ಭೋಂಸ್ಲೆ, ರಾಜೇಶ್ ಕೃಷ್ಣನ್ ಮುಮನತಾದ ಗಣ್ಯರು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಇಂದು ನಡೆಯುತ್ತಿರುವ ಎಸ‌್ ಪಿಬಿ ಅಂತ್ಯಕ್ರಿಯೆಗೆ ಚಿತ್ರರಂಗದ ಗಣ್ಯರು, ಕಲಾವಿದರು, ಸಂಗೀತ ನಿರ್ದೇಶಕರು, ಗಾಯಕರು ಅಂತಿಮ ನಮನ ಸಲ್ಲಿಸಿದರು. ಸರ್ಕಾರಿ ಸಕಲ ಗೌರವಗಳೊಂದಿಗೆ ಕುಶಾಲ ತೋಪುಗಳನ್ನು ಹಾರಿಸಲಾಯಿತು.

ನಂತರ ಆಂದ್ರ ಬ್ರಾಹ್ಮಣ ಸಂಪ್ರದಾಯ ದಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

error: Content is protected !!