ಪುನೀತ್ 11ನೇ ದಿನದ ಕಾರ್ಯ: ಸಂಗಮದಲ್ಲಿ ಅಪರ ಕರ್ಮ ಮಾಡಿ, ತಪ೯ಣ ಬಿಟ್ಟ ವಿನೋದ್ ರಾಜ್‍

Team Newsnap
1 Min Read

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 11ನೇ ದಿನದ ಕಾರ್ಯವನ್ನು ಶ್ರೀರಂಗಪಟ್ಟಣ ಸಂಗಮದಲ್ಲಿ ಅಪರ ಕರ್ಮವನ್ನು ನಟ ವಿನೋದ್ ರಾಜ್‍ ನೆರವೇರಿಸಿದರು

ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್​ರವರ 11ನೇ ದಿನವಾದ ಸೋಮವಾರ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ನಟ ವಿನೋದ್​​ ರಾಜ್​​​​, ಶ್ರೀರಂಗಪಟ್ಟಣದ ಗಂಜಾಂ ಬಳಿ ಸಂಗಮದಲ್ಲಿ ಅಪರ ಕರ್ಮ ಕಾರ್ಯ, ತಪ೯ಣ ಬಿಟ್ಟು ವೈದಿಕ ಕಾರ್ಯ ಮಾಡಿದರು.

ಪುನೀತ್ ನಿಧನದ 11ನೇ ದಿನದ ಪುಣ್ಯತಿಥಿ ಹಿನ್ನೆಲೆಯಲ್ಲಿ
ಸಂಗಮಕ್ಕೆ ಹಿರಿಯ ನಟಿ ಲೀಲಾವತಿ, ನಟ ವಿನೋದ್​ ರಾಜ್ ಆಗಮಿಸಿದ್ದರು.

vinodraj

ಸಂಗಮದ ಕಾವೇರಿ ನದಿ ತೀರಕ್ಕೆ ಆಗಮಿಸಿ ನದಿ ತೀರದಲ್ಲಿ ಮೃತ ಪುನೀತ್ ರಾಜ್​​ಕುಮಾರ್​​​ಗೆ ವೈದಿಕ ಪೂಜಾ ಕೈಂಕರ್ಯ ನೆರವೇರಿಸಿ ತರ್ಪಣ ಅರ್ಪಿಸಿದರು.

ಅಲ್ಲದೇ ಇದಕ್ಕೂ ಮುನ್ನ ಸ್ಥಳದಲ್ಲಿ ಆಶ್ಲೇಷ ಬಲಿ ಹಾಗೂ ನಾರಾಯಣ ಬಲಿ ಪೂಜೆ ನಡೆಸಿ ಪುನೀತ್ ಆತ್ಮಕ್ಕೆ ಶಾಂತಿ ಕೋರಿದರು.

ಈ ವೇಳೆ ಲೀಲಾವತಿ ಅವರ ಕುಟುಂಬದ ಸಮೀಪದ ಬಂಧುಗಳು ಸ್ಥಳದಲ್ಲಿ ಹಾಜರಿದ್ದರು.

Share This Article
Leave a comment