ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಮೊಪೆಡ್ ಉಚಿತ -ಕುಮಾರಸ್ವಾಮಿ ಪ್ರಕಟ

Team Newsnap
1 Min Read

ಜೆಡಿಎಸ್ ನ ಪಂಚರತ್ನ ರಥಯಾತ್ರೆಯು ಮತ್ತೆ ಮುಂದುವರೆದಿದೆ. ಈ ಯಾತ್ರೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್​ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕಲ್ ಮೊಪೆಡ್ ದ್ವಿಚಕ್ರ ವಾಹನವನ್ನು ನೀಡುವುದಾಗಿ ಘೋಷಿಸಿದ್ದಾರೆ.

ಕೆಂಚೇನಹಳ್ಳಿಯ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದ ಹೆಚ್​.ಡಿ ಕುಮಾರಸ್ವಾಮಿ, ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕಲ್ ಮೊಪೆಡ್ ದ್ವಿಚಕ್ರ ವಾಹನ ನೀಡುವುದಾಗಿ ಹೇಳಿದರು.

4 ತಿಂಗಳಿನಿಂದ ಬಿಸಿಲಲ್ಲೇ ಇದ್ದೇನೆ.. ಏನೂ ಆಗಿಲ್ಲ:

ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ಎಲೆಕ್ಷನ್​ ಕೆಲಸ ಇದ್ದಿದ್ದರಿಂದ ತಡವಾಗಿ ಆಗಮಿಸಿದೆ. ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಇದೇ ವೇಳೆ ಡ್ರೈವರ್​ ನೆರಳಿಗೆ ಯಾತ್ರೆಯ ವಾಹನ ನಿಲ್ಲಿಸಲು ಮುಂದಾಗುತ್ತಿದ್ದರು. ಆಗ ಕುಮಾರಸ್ವಾಮಿ ಅವರು ವಾಹನ ನೆರಳಿಗೆ ಹಾಕಬೇಡಿ. ಕಾರ್ಯಕರ್ತರು ಬಿಸಿಲು ಜಾಸ್ತಿ ಇದೆ, ಅಣ್ಣ ಎಂದರು. ಇದಕ್ಕೆ 4 ತಿಂಗಳಿಂದ ಬಿಸಿಲಲ್ಲೇ ಇದ್ದೇನೆ. ಏನೂ ಆಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.ಇದನ್ನು ಓದಿ –ಇಂದು , ನಾಳೆ ಮೈಸೂರಿಗೆ ಪ್ರಧಾನಿ : ಕಾರ್ಯಕ್ರಮದ ವಿವರ

Share This Article
Leave a comment