Mandya

ಮಂಡ್ಯದಲ್ಲಿ ಬಟ್ಟೆ ಅಂಗಡಿಗಳ ಮಾಲೀಕರಿಗೆ ಟೋಪಿ ಹಾಕಿ ಲಕ್ಷಾಂತರ ರು ಲಪಟಾಯಿಸಿದವನ ಬಂಧನ

ನೆಟ್ ವರ್ಕ್ ಸಮಸ್ಯೆ ನೆಪದಲ್ಲಿಇಬ್ಬರು ಬಟ್ಟೆ ಅಂಗಡಿ ಮಾಲೀಕರಿಂದ ಸಿಮ್‌ ಪಡೆದ ಚಾಲಾಕಿ ಕಳ್ಳನೊಬ್ಬ ಬ್ಯಾಂಕ್‌ ಖಾತೆಯಲ್ಲಿನ ಹಣವನ್ನು ಎಗರಿಸಿರುವ ಪ್ರಕರಣವನ್ನು ಭೇದಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.ಚಾಲಾಕಿ ಕಳ್ಳನನ್ನು ಬಂಧಿಸಿ, ಆತನಿಂದ 51 ಸಾವಿರ ರೂ. ನಗದ ವಶಪಡಿಸಿಕೊಂಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ 22 ರಂದು ಮಂಡ್ಯದ ನಗರದ ಚಾಮುಂಡಿ ಪ್ಯಾಷನ್‌ ಅಂಗಡಿಗೆ ಬಂದಿದ್ದ ಆರೋಪಿ ಲೋಕೇಶ್‌, ಒಂದಷ್ಟು ಬಟ್ಟೆಗಳನ್ನು ಖರೀದಿಸಿದ್ದ. ಅವುಗಳ ಮೊತ್ತವನ್ನು ಅಂಗಡಿಯ ಪೇಟಿಎಂ ಖಾತೆಗೆ ಕಳುಹಿಸುವುದಾಗಿ ತಿಳಿಸಿದ.

ಆದರೆ, ಕೆಲವೊತ್ತಿನ ಬಳಿಕ ನನ್ನ ಮೊಬೈಲ್‌ ನೆಟ್‌ವರ್ಕ್ ಸಮಸ್ಯೆ ಇದೆ, ನಿಮ್ಮ ಸಿಮ್‌ ನೀಡಿದರೆ ಅದರ ನೆಟ್‌ವರ್ಕ್ ನೆರವಿನಿಂದ ನಿಮ್ಮ ಪೇಟಿಎಂ ಖಾತೆಗೆ ಹಣ ಕಳುಹಿಸುತ್ತೇನೆಂದು ಆರೋಪಿ ತಿಳಿಸಿದ್ದಾನೆ.

ಈ ಮಾತನನ್ನು ನಂಬಿದ ಅಂಗಡಿ ಮಾಲೀಕ ಕಿಮ್ಸಿಂಗ್‌ ಅವರು ಮೊಬೈಲ್‌ ಸಿಮ್‌ ಅನ್ನು ಆರೋಪಿಗೆ ನೀಡಿದ್ದಾರೆ. ಆಗ ತನ್ನ ಮೊಬೈಲ್‌ಗೆ ಹಾಕಿ ಏನೇನೋ ವರ್ಕ್ ಮಾಡಿ, ವರ್ಕ್ ಆಗುತ್ತಿಲ್ಲವೆಂದು ಸಿಮ್‌ ವಾಪಸು ನೀಡಿ ಅಲ್ಲಿಂದ ಹೊರಟು ಹೋಗಿದ್ದಾನೆ. ನಂತರ ಕಿಮ್ಸಿಂಗ್‌ ಬ್ಯಾಂಕ್‌ ಖಾತೆಯಿಂದ ಕ್ರಮವಾಗಿ 50 ಸಾವಿರ ರೂ.ನಂತೆ ತಲಾ 3 ಬಾರಿ ಒಟ್ಟು 1.50 ಲಕ್ಷ ರೂ. ಕಡಿತಗೊಂಡಿದೆ.

ಈ ಬಗ್ಗೆ ಅಂಗಡಿ ಮಾಲೀಕ ಕಿಮ್ಸಿಂಗ್‌ ಮಂಡ್ಯದ ಸೈಬರ್ ಕ್ರೈಂ ಅಪರಾಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಇದೇ ವ್ಯಕ್ತಿ ಮತ್ತೆ ಮಾ. 23ರಂದು ಬೆಳ್ಳೂರು ಪಟ್ಟಣದ ರಾಜಲಕ್ಷ್ಮಿ ಟೆಕ್ಸ್‌ಟೈಲ್ಸ್‌ ಅಂಗಡಿಗೆ ತೆರಳಿ ಬಟ್ಟೆ ಖರೀದಿ ಮಾಡಿದ್ದಾನೆ.

ಹಣವನ್ನು ಗೂಗಲ್‌ ಪೇ ಮಾಡುವುದಾಗಿ ತಿಳಿಸಿ ನಂತರ ಅಲ್ಲಿಯೂ ಮೊಬೈಲ್‌ ನೆಟ್‌ವರ್ಕ್ ಸಮಸ್ಯೆ ನೆಪ ಹೇಳಿ, ಮಾಲೀಕ ಓಂಪ್ರಕಾಶ್‌ ಅವರ ಸಿಮ್‌ ಪಡೆದುಕೊಂಡು ಅದರಲ್ಲೂ ಹಣ ವರ್ಗಾವಣೆ ಆಗುತ್ತಿಲ್ಲವೆಂದು ತಿಳಿಸಿ ವಾಪಸು ನೀಡಿ ಹೊರಟು ಹೋಗಿದ್ದಾನೆ. ಸ್ವಲ್ಪ ಹೊತ್ತಿನಲ್ಲಿ ಓಂಪ್ರಕಾಶ್‌ ಅವರ ಖಾತೆಯಿಂದಲೂ 80,000 ರು ಹಣ ಬ್ಯಾಂಕ್‌ ಖಾತೆಯಿಂದ ಕಡಿತಗೊಂಡಿದ್ದು, ಈ ಬಗ್ಗೆ ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ಈಗ ಕಳ್ಳ ಲೋಕೇಶ್ ನನ್ನು ಬಂಧಿಸಿ ಎರಡು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು

ಮೈಸೂರು : ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದ್ದು ,ಎಫ್‍ಐಆರ್… Read More

May 3, 2024

ರಾಮನಗರ : ಐಜೂರಿನಲ್ಲಿ ಕರಡಿ ಪ್ರತ್ಯಕ್ಷ

ರಾಮನಗರ : ಮೂರು ದಿನಗಳ ಹಿಂದೆ ಕರಡಿಯೊಂದು ಐಜೂರಿನ ಜನವಸತಿ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.… Read More

May 3, 2024

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲು

ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More

May 3, 2024

ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಕೊಂದ ಪತಿ

ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More

May 3, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 3 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,250 ರೂಪಾಯಿ ದಾಖಲಾಗಿದೆ. 24… Read More

May 3, 2024

SIT ಯಿಂದ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ

ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More

May 2, 2024