ಮಾಜಿ ಸಚಿವ ಜಿ.ಟಿ ದೇವೇಗೌಡ ಜೆಡಿಎಸ್​​ಗೆ ಗುಡ್​​ ಬೈ – ಕಾಂಗ್ರೆಸ್ ಗೆ ಸೇರ್ಪಡೆ ಘೋಷಣೆ

Team Newsnap
1 Min Read

ಮಾಜಿ ಸಚಿವ ಜಿ.ಟಿ ದೇವೇಗೌಡ ಜೆಡಿಎಸ್​​ಗೆ ಗುಡ್​​ ಬೈ ಹೇಳಿ ಕಾಂಗ್ರೆಸ್​ ಸೇರ್ಪಡೆಯಾಗುವ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತಾನಾಡಿದ ದೇವೇಗೌಡರು, ನಾನು ಕಾಂಗ್ರೆಸ್ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್​​ ಜತೆ ಮಾತಾಡಿದ್ದೇನೆ. ಅಲ್ಲದೇ ಜೆಡಿಎಸ್​​ ತೊರೆದು ಕಾಂಗ್ರೆಸ್​ ಸೇರುತ್ತಿದ್ದೇನೆ. ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ಮಾಜಿ ಪ್ರಧಾನಿ‌ ದೇವೇಗೌಡರನ್ನು ಕೋರಿದ್ದೇನೆ ಎಂದರು.

ಮೈಸೂರಿನಲ್ಲಿ ನನಗೆ, ನನ್ನ ಮಗ ಇಬ್ಬರಿಗೂ ಟಿಕೆಟೆ ಕೇಳಿದ್ದೇನೆ. ಇಬ್ಬರಿಗೂ ಟಿಕೆಟ್ ಸಿಗುವ ವಿಶ್ವಾಸ ಇದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ನೀನು ಪಕ್ಷಕ್ಕೆ ಬಂದರೆ, ನಾನು ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌‌‌ ಯಾವತ್ತೂ ಇಬ್ಬಾಗ ಆಗಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ, ಡಿಕೆಶಿ ಅಭಿಮಾನಿಗಳು ತಮ್ಮ ನಾಯಕ ಸಿಎಂ ಆಗಬೇಕೆಂದು ಘೊಷಣೆ ಕೂಗುತ್ತಾರೆ. ಆದರೆ, ನಾನು ಇಬ್ಬರೂ ನಾಯಕರ ಜೊತೆ ಮಾತುಕತೆ ನಡೆಸಿದ್ದೇನೆ.

ಸಧ್ಯಕ್ಕೆ ಈ ಅವಧಿಯವರೆಗೂ ನಾನು ಜೆಡಿಎಸ್‌ನಲ್ಲಿ ಇರ್ತೇನೆ. ನಾಳೆ ನಡೆಯುವ ಮೈಸೂರು ಮೇಯರ್ ಚುನಾವಣೆಗೆ ಹೋಗಬೇಕೋ, ಬೇಡವೋ ಇನ್ನೂ ತೀರ್ಮಾನ ಆಗಿಲ್ಲ

Share This Article
Leave a comment